ಕಾರಣವಿಲ್ಲದೇ ರಸ್ತೆಯಲ್ಲಿ ಓಡಾಡಿದ್ರೆ ಬೀಳುತ್ತೆ ಲಾಠಿ ಏಟು !

ಬೆಂಗಳೂರು, ಮಾರ್ಚ್ 24, 2020 (www.justkannada.in): ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಈ ನಡುವೆ ರಾಜ್ಯದ ನಾನಾ ಭಾಗಗಳಲ್ಲಿ ಜನತೆ ಮೀತಿ ಮೀರಿ ನಡೆದುಕೊಳ್ಳುತ್ತಿದ್ದು, ಕಾರಣವಿಲ್ಲದೇ ಗುಂಪುಗೂಡುವುದು, ಒಂದು ಕಡೆಯಿಂದ ಇನ್ನೊಂದು ಕಡೆಗೆ ಓಡಾಡುವುದು ಸೇರಿದಂತೆ ಸುಖ ಸುಮ್ಮನೆ ಮನೆಯಿಂದ ಹೊರಗಡೆ ತಿರುಗಾಡುತ್ತಿದ್ದಾರೆ.

ಇಂದು ಪ್ರಾರಂಭದಲ್ಲಿ ಜನತೆಯಲ್ಲಿ ಮನೆಯಿಂದ ಅಗತ್ಯ ಸನ್ನಿವೇಶ ಬಿಟ್ಟು ಬೇರೆ ಕಾರಣಕ್ಕೆ ಬಾರದಂತೆ ಮನವಿ ಮಾಡಿಕೊಂಡರು ಕೂಡ ಅನೇಕ ಮಂದಿ ಮನೆಯಿಂದ ತಿರುಗಾಡುತ್ತಿರುವುದುನ್ನು ಗಮನಿಸಿ ಪರಿಸ್ಥಿತಿಯನ್ನು ನಿಭಾಯಿಸುವ ಸಲುವಾಗಿ ಲಘು ಲಾಠಿ ಪ್ರಹಾರ ನಡೆಸಿತ್ತಿದ್ದಾರೆ.