ದಾಸ ಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ : ಸಚಿವ ಎಸ್.ಟಿ. ಸೋಮಶೇಖರ್

ಮೈಸೂರು,ಡಿಸೆಂಬರ್,03,2020(www.justkannada.in) : ಕರ್ನಾಟಕ ದಾಸ ಸಾಹಿತ್ಯದಲ್ಲಿ ಕನಕದಾಸರ ಕೊಡುಗೆ ಅಪಾರ. 15-16ನೇ ಶತಮಾನದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಇವರು ಪ್ರಮುಖರು ಎಂದು ಸ್ಮರಿಸಿ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕನಕದಾಸ ಜಯಂತಿಗೆ ಶುಭಾಶಯ ಕೋರಿದ್ದಾರೆ.logo-justkannada-mysoreಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಜನಿಸಿದ್ದು, ಕನ್ನಡದ ಪ್ರಸಿದ್ಧ ಕೀರ್ತನಕಾರರು. ಇವರು ಶ್ರೀ ವ್ಯಾಸರಾಯರ ನೆಚ್ಚಿನ ಶಿಷ್ಯರಾಗಿದ್ದಾರೆ. ಅವರಿಂದ ಮಧ್ವ ತತ್ವಶಾಸ್ತ್ರವನ್ನು ನಿಷ್ಠೆಯಿಂದ ಕಲಿತ ಕನಕದಾಸರು, ಉಡುಪಿ ಶ್ರೀ ಕೃಷ್ಣನ ಮೇಲೆ ಅಪಾರ ಭಕ್ತಿಯನ್ನು ಹೊಂದಿದ್ದರು ಎಂದರು.

ಜಾತಿಪದ್ಧತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿ, ತಾರತಮ್ಯಗಳ ವಿರುದ್ಧ ಕೀರ್ತನೆಗಳ ಅಸ್ತ್ರ ಪ್ರಯೋಗಿಸಿದರು

ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿ, ತಾರತಮ್ಯಗಳ ವಿರುದ್ಧ ಕೀರ್ತನೆಗಳ ಅಸ್ತ್ರ ಪ್ರಯೋಗಿಸಿದರು. “ಕುಲಕುಲವೆಂದು ಹೊಡೆದಾಡದಿರಿಎಂಬ ತತ್ವ ಸಂದೇಶವನ್ನು ಬಿತ್ತಿದ ಅವರು, ನಾಡಿನ ಅದಮ್ಯ ಮಹಾನ್ ಸಂತರು. ಕನಕದಾಸರನ್ನು ಸಂತ, ತತ್ವಜ್ಞಾನಿ, ಕವಿ, ಸಂಗೀತಗಾರರು ಹೀಗೆ ಎಲ್ಲ ತರಹದಲ್ಲೂ ಗುರುತಿಸಬಹುದು. ಅವರ ಪಾಂಡಿತ್ಯದ ಅಗಾಧತೆ ಅಷ್ಟರಮಟ್ಟಿಗಿತ್ತು ಎಂದು ಹೇಳಿದ್ದಾರೆ.

ಕನಕದಾಸರ ತತ್ವಾದರ್ಶಗಳು ಇಂದಿಗೂ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ

ಕನಕದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ಹಾಗೂ ಅವರ ಕೀರ್ತನೆಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ದಾಸ ಸಾಹಿತ್ಯದ ವೈಚಾರಿಕಾ ಪ್ರಭೆಯು ಇಂದು ಎಲ್ಲೆಡೆ ಹರಡಿದ್ದು, ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ. ಅಲ್ಲದೆ, ಅವರ ಆದರ್ಶದ ನಡೆ ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಅವರ ಕೊಡುಗೆ ಅನನ್ಯ ಎಂದರು.

contribution,Kanakadasas,Dasa,literature,immense,Minister, S.T.Somashekhar

ಅವರ ಚಿಂತನೆಗಳನ್ನು ನಾವು ಅಳವಡಿಸಿಕೊಳ್ಳೋಣ ಎಂಬ ಪಣ ತೊಡೋಣ. ಸಾಧ್ಯವಾದಷ್ಟು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತೇವೆಂಬ ನಿಟ್ಟಿನಲ್ಲಿ ಪ್ರತಿಜ್ಞೆಗೈಯ್ಯೋಣ. ಮೂಲಕ ಅರ್ಥಪೂರ್ಣವಾಗಿ ಭಕ್ತ ಕನಕ ದಾಸರ ಜಯಂತಿಯನ್ನು ಆಚರಿಸೋಣ. ಎಲ್ಲರಿಗೂ ಕನಕದಾಸ ಜಯಂತಿಯ ಹಾರ್ದಿಕ ಶುಭಾಶಯಗಳು ಎಂದು ತಿಳಿಸಿದ್ದಾರೆ.

key words : contribution-Kanakadasas-Dasa-literature-immense-Minister- S.T.Somashekhar