ಪಕ್ಷ ಸೂಚಿಸಿದರೇ ಮತ್ತೆ ಸಿದ್ಧರಾಮಯ್ಯ ವಿರುದ್ದ ಸ್ಪರ್ಧಿಸುತ್ತೇನೆ- ಸಚಿವ ಬಿ.ಶ್ರೀರಾಮುಲು.

ಬೀದರ್,ಜುಲೈ,19,2022(www.justkannada.in):  ಸಿದ್ಧರಾಮಯ್ಯ ಬದಾಮಿಯಲ್ಲಿ ಮತ್ತೆ ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳಲಿದ್ದಾರೆ. ಪಕ್ಷ ಸೂಚಿಸಿದರೇ ಮತ್ತೆ ಸಿದ್ಧರಾಮಯ್ಯ ವಿರುದ್ದ ಸ್ಪರ್ಧಿಸುತ್ತೇನೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.

ಬೀದರ್ ನಲ್ಲಿ ಇಂದು ಮಾತನಾಡಿದ ಸಚಿವ ಶ್ರೀರಾಮುಲು, ಸಿದ್ದರಾಮಯ್ಯ ಪಕ್ಷದ ಸಪೋರ್ಟ್ ಮೇಲೆ ಹಾರಾಡುತ್ತಿದ್ದಾರೆ. ವೈಯಕ್ತಿಕ ವರ್ಚಸ್ಸು ಇಲ್ಲ. ಸ್ವಂತ ಸಿದ್ಧಾಂತ, ಶಕ್ತಿ ಇಲ್ಲ ಹಿಂದುಳಿದ ಜಾತಿ ಹೆಸರು ಹೇಳಿ ರಾಜಕೀಯ ಮಾಡುತ್ತಿದ್ದಾರೆ. ಬದಾಮಿಯಲ್ಲಿ ಮತ್ತೆ ಸ್ಪರ್ಧಿಸಿದರೆ ಠೇವಣಿ ಕಳೆದುಕೊಳ್ಳಲಿದ್ದಾರೆ. ಜನರು ನನ್ನ ಸೋಲಿಸಿ ಪಶ್ಚಾತ್ತಾಪ ಪಡುತ್ತಿದ್ದಾರೆ.ಕ್ಷೇತ್ರ ಹುಡುಕಾಟದಲ್ಲಿರುವ ಸಿದ್ದರಾಮಯ್ಯ ಹೇಗೆ ಸಿಎಂ ಆಗುತ್ತಾರೆ ಎಂದು ಕಿಡಿಕಾರಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಭಸ್ಮಾಸುರ ಇದ್ದಂತೆ, ಅವರು ಯಾವ ಪಕ್ಷಕ್ಕೆ ಹೋದರೂ ಆ ಪಕ್ಷವನ್ನು ಮುಳುಗಿಸುತ್ತಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಸಿಎಂ ಕುರ್ಚಿಗಾಗಿ ಗುದ್ದಾಟ ಶುರುವಾಗಿದೆ ಎಂದು ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದರು.

Key words: contest -against –Siddaramaiah-again-Minister -B. Sriramulu.