Thursday, September 17, 2026

BDA Apartments

Home Front Page ಕಾಂಗ್ರೆಸ್ ತಾವು ಜೈಲಿಗೆ ಹೋಗೋದನ್ನ ತಪ್ಪಿಸಿಕೊಳ್ಳಲಿ- ಟೆಂಡರ್ ಗೋಲ್ಮಾಲ್ ಆರೋಪಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು.

ಕಾಂಗ್ರೆಸ್ ತಾವು ಜೈಲಿಗೆ ಹೋಗೋದನ್ನ ತಪ್ಪಿಸಿಕೊಳ್ಳಲಿ- ಟೆಂಡರ್ ಗೋಲ್ಮಾಲ್ ಆರೋಪಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು.

ಬೆಂಗಳೂರು,ಫೆಬ್ರವರಿ,15,2023(www.justkannada.in): ರಾಜ್ಯ ಸರ್ಕಾರ ಟೆಂಡರ್ ಗೋಲ್ಮಾಲ್ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ ಕಾಂಗ್ರೆಸ್ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಆರೋಪಕ್ಕೆ ದಾಖಲೆ ನೀಡಬೇಕು. ಕಾಂಗ್ರೆಸ್ ನವರು ತಾವು ಮಾಡಿದ ಅನುಭವದಿಂದ ಮಾತನಾಡುತ್ತಿದ್ದಾರೆ. ಕಳೆದ ಚುನಾವಣೆ ವೇಳೆ ಮಾಡಿದ್ದ ಕರ್ಮಕಾಂಡ ನೆನೆಸಿಕೊಳ್ಳೂತ್ತಿದ್ದಾರೆ.  ಕಾಂಗ್ರೆಸ್ ಅವಧಿಯ ಅಕ್ರಮ ಲೋಕಾಯುಕ್ತದಲ್ಲಿದೆ. ಕಾಂಗ್ರೆಸ್ ತಾವು ಜೈಲಿಗೆ ಹೋಗೋದನ್ನ ತಪ್ಪಿಸಿಕೊಳ್ಳಲಿ. ಜಾಮೀನು ಪಡೆದು ರಕ್ಷಣೆ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದರು.

ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದರೆ ಸುಲಿಗೆ ಮಾಡುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ನಾಯಕರ ಹೇಳಿಕೆಯಿಂದ ಅಜೆಂಡಾ ಸ್ಪಷ್ಟವಾಗಿದೆ. 40  ಪರ್ಸೆಂಟ್ ಕಮಿಷನ್  ಆರೋಪದ ಬಗ್ಗೆ ಸಾಬೀತು ಮಾಡಿಲ್ಲ. ಕೋರ್ಟ್ ನಲ್ಲಿ ಕೇಸ್ ದಾಖಲಿಸುತ್ತೇವೆ ಎಂದಿದ್ದರು. ಆದರೆ ದಾಖಲಿಸಿಲ್ಲ. ಕಾಂಗ್ರೆಸ್ ನವರು ತಮ್ಮ ಕಾಲದ ಟೆಂಡರ್ ಅಕ್ರಮದ ಬಗ್ಗೆ ಉತ್ತರಿಸಲಿ ಎಂದು ಸಿಎಂ ಬೊಮ್ಮಾಯಿ ಸವಾಲು ಹಾಕಿದರು.

Key words: Congress-avoid-jail-CM-Bommai – tender -allegation.