ರ್ಯಾಪರ್ ಚಂದನ್ ಶೆಟ್ಟಿ ಅಯೋಗ್ಯ- ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ವಾಗ್ದಾಳಿ….

ಮೈಸೂರು,ಆ,25,2020(www.justkannada.in):   ‘ಕೋಲುಮಂಡೆ’ ಆಲ್ಬಂ ಹಾಡಿನಲ್ಲಿ  ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಹಿನ್ನೆಲೆ ರ್ಯಾಪರ್ ಚಂದನ್ ಶೆಟ್ಟಿ ವಿರುದ್ದ ಸಾಕಷ್ಟು ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಇದೀಗ ಇತಿಹಾಸ ತಜ್ಞ ನಂಜರಾಜೇ ಅರಸ್ ಸಹ  ವಾಗ್ದಾಳಿ ನಡೆಸಿದ್ದಾರೆ.jk-logo-justkannada-logo

ಮೈಸೂರಿನಲ್ಲಿ ಮಾತನಾಡಿ ರ್ಯಾಪರ್ ಚಂದನ್ ಶೆಟ್ಟಿ ವಿರುದ್ದ ಕಿಡಿಕಾರಿರುವ ನಂಜರಾಜೇ ಅರಸ್, ರ್ಯಾಪರ್ ಸ್ಟಾರ್ ಚಂದನ್ ಶೆಟ್ಟಿ ಅಯೋಗ್ಯ. ಮನೆಯಲ್ಲಿ ಗೌರಿ ಗಣೇಶನನ್ನ ಪೂಜಿಸುತ್ತೇವೆ. ಚಂದನ್ ಶೆಟ್ಟಿಗೆ ಕೇಳ್ತಿನಿ. ಗೌರಿ ಪೂಜೆಗೆ ಚಂದನ್ ಶೆಟ್ಟಿ ತನ್ನ ಗರ್ಲ್ ಫ್ರೇಂಡ್ ನ  ಬಿಕಿನಿ ಹಾಕಿಸ್ಕೊಂಡು ಹೋಗ್ತಾನಾ ಎಂದು ಪ್ರಶ್ನಿಸಿದ್ದಾರೆ.

ಮಹದೇಶ್ವರ ಜನಪದ ಹಾಡುಗಳೆಂದರೇ ಅದರಲ್ಲಿ ನಮ್ಮ ಸಂಸ್ಕೃತಿ ಇದೆ. ಹುಡುಗಿಯರನ್ನ  ಕೆಟ್ಟ ರೀತಿಯಲ್ಲಿ ಬಳಸಿಕೊಂಡು ಹಾಡಿನಲ್ಲಿ ಅಶ್ಲೀಲವಾಗಿ ಬಿಂಬಿಸುತ್ತಾನೆ. ನಮ್ಮ ಭಾವನೆಗಳಿಗೆ ಧಕ್ಕೆ ತರುವಂತ ಕೆಲಸ ಮಾಡಬಾರದು. ಹೊಸತನ ಕೋಡ್ತೀವಿ, ಇಂಗ್ಲೆಂಡ್ ನ ರೀತಿ ಮ್ಯೂಸಿಕ್ ಮಾಡ್ತೀವಿ ಅಂತಾರೆ. ಲವ್ ಗಿವ್ ಸಾಂಗ್ ಗಳನ್ನ ಅವರಿಷ್ಟ ಬಂದಂತೆ ಮಾಡಿಕೊಳ್ಳಲಿ. ಆದರೇ ನಮ್ಮ ಸಂಸ್ಕೃತಿಯನ್ನ ಸಾಯಿಸುವ ಕೆಲಸ ಆಗಬಾರದು ಎಂದು ನಂಜರಾಜೇ ಅರಸ್ ಹೇಳಿದರು.chandan-shetty-awkward-historian-nanjaraje-aras

ರ್ಯಾಪರ್ ಸಾಂಗ್ ಕೇಳೋದು ಹಿತವಿರಬಹುದು. ಸಾಂಸ್ಕೃತಿಕವಾಗಿ, ದೇವಿ ಹಿನ್ನಲೆ, ಪ್ರಭಾವಳಿಯನ್ನ ಇಟ್ಟುಕೊಂಡಿದ್ದೇವೆ. ನಮ್ಮ ಸಂಸ್ಕೃತಿಯ ತತ್ವಕ್ಕೆ ಅವಮಾನ ಮಾಡುವಂತ ಕೆಲಸ ಆಗಬಾರದು. ಕೂಡಲೇ ಆ ಸಾಂಗ್ ಹಿಂಪಡೆಯಬೇಕು ಎಂದು ಇತಿಹಾಸ ತಜ್ಞ ಪ್ರೋ. ನಂಜರಾಜೇ ಅರಸ್  ಆಗ್ರಹಿಸಿದರು.

Key words: Chandan Shetty – Awkward-Historian – Nanjaraje aras-mysore