BREAKING NOW : ಉಗ್ರರ ದಾಳಿ ಭೀತಿ : ಅಮರನಾಥ ಯಾತ್ರೆ ಮೊಟಕುಗೊಳಿಸಿ ಹಿಂದಿರುಗುವಂತೆ ಯಾತ್ರಾರ್ಥಿಗಳಿಗೆ ಸೂಚಿಸಿದ JK ಸರಕಾರ.

 

ನವದೆಹಲಿ, ಆ.02, 2019 : (www.justkannada.in news) : ಅಮರನಾಥ ಯಾತ್ರೆಗೆಂದು ತೆರಳಿರುವ ಯಾತ್ರಾರ್ಥಿಗಳು ಈ ಕೂಡಲೇ ಪ್ರವಾಸ ಮೊಟಕುಗೊಳಿಸಿ ಸ್ವಕ್ಷೇತ್ರಕ್ಕೆ ಹಿಂದಿರುವಂತೆ ಜಮ್ಮು-ಕಾಶ್ಮೀರ ಆಡಳಿತ ಸೂಚನೆ ನೀಡಿದೆ.

ಉಗ್ರರ ಶಂಕಿತ ದಾಳಿ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಮ್ಮು-ಕಾಶ್ಮೀರ ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಅದೇಶ ಹೊರಡಿಸಿರುವ ರಾಜ್ಯ ಸರಕಾರ, ಅಮರನಾಥ ಯಾತ್ರೆಗೆ ಆಗಮಿಸಿರುವವರನ್ನು ಗುರಿಯನ್ನಾಗಿರಿಸಿಕೊಂಡು ಉಗ್ರರು ದಾಳಿ ನಡೆಸುವ ಬಗೆಗೆ ಖಚಿತ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಈ ಕೂಡಲೇ ಯಾತ್ರೆ ಮೊಟಕುಗೊಳಿಸಿ ತಮ್ಮ ತಮ್ಮ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ.

KEY WORDS : JK administration – advisory to tourists-yatris- asks them to cut short their visit- leave state -terror threats

Breaking – JK administration issues advisory to tourists and yatris and asks them to cut short their visit and leave state of Jammu #kashmir in view of terror threats