ಕೆಲಸ ಮಾಡದೆ ಬಿಲ್ ಪಡೆದು ಕಾಮಗಾರಿ ಹೆಸರಲ್ಲಿ ನೂರಾರು ಕೋಟಿ ಲೂಟಿ-  ಮುನಿರತ್ನ ವಿರುದ್ಧ ಡಿ.ಕೆ ಶಿವಕುಮಾರ್ ಆರೋಪ…

ಬೆಂಗಳೂರು,ಅಕ್ಟೋಬರ್,30,2020(www.justkannada.in): ಆರ್. ಆರ್ ನಗರ ಉಪಚುನಾವಣಾ ಆಖಾಡದಲ್ಲಿ ಪ್ರಚಾರದ ಭರಾಟೆ ಜೋರಾಗಿದ್ದು, ಈ ನಡುವೆ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.jk-logo-justkannada-logo

ಕ್ಷೇತ್ರದಲ್ಲೊಬ್ಬ ವ್ಯಕ್ತಿ ಕೆಲಸ ಮಾಡದೇನೆ ಬಿಲ್ ಪಡೆದಿದ್ದಾನೆ. ಕಾಮಗಾರಿ ಹೆಸರಲ್ಲಿ ನೂರಾರು ಕೋಟಿ ಲೂಟಿ ಹೊಡೆದಿದ್ದಾರೆ.  ಈ ಕ್ಷೇತ್ರದಲ್ಲಿ ಅಂತಹ ವ್ಯಕ್ತಿ ಹೋದದ್ದೇ ಒಳ್ಳೆಯದಾಯ್ತು. ಇಂತವರನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಆಗಲ್ಲ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದರು.bill-stolen-hundreds-crores-without-working-kpcc-president-dk-sivakumar-muniratna

ಮಾಧ್ಯಮಗಳ ಜತೆ ಇಂದು ಮಾತನಾಡಿದ ಡಿ.ಕೆ ಶಿವಕುಮಾರ್, ಈ ಬಾರಿ ಹೆಣ್ಣುಮಗಳಿಗೆ ಅವಕಾಶ ನೀಡಿದ್ದೇವೆ.  ಉಪಚುನಾವಣೆಗಳಲ್ಲಿ ಮತದಾರರು ಪಕ್ಷಗಳನ್ನ ಬಿಟ್ಟುಬಿಡಿ.  ನೀಚ ರಾಜಕಾರಣ ಮಾಡುವವರ ವಿರುದ್ಧ ಮತ ನೀಡಿ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: Bill –stolen- hundreds – crores- without- working-KPCC-president-DK Sivakumar –Muniratna