ಯಡಿಯೂರಪ್ಪ ಎಲ್ಲಿದ್ದೀಯಪ್ಪ ಎಂಬ ಹೆಚ್.ಡಿಕೆ ಹೇಳಿಕೆಗೆ ಶಾಸಕ ರೇಣುಕಾಚಾರ್ಯ ತಿರುಗೇಟು: ಸಿದ್ದರಾಮಯ್ಯ ವಿರುದ್ದವೂ ಕಿಡಿ..

ಬೆಂಗಳೂರು,ಆ,8,2019(www.justkannada.in) : ಉತ್ತರ ಕರ್ನಾಟಕ ಪ್ರವಾಹದಲ್ಲಿ ಸ್ಥಿತಿ ನಿರ್ಮಾಣವಾಗಿದ್ದರೂ ದೆಹಲಿಯಲ್ಲಿದ್ದ ಸಿಎಂ ಬಿಎಸ್ ಯಡಿಯೂರಪ್ಪಗೆ  ಯಡಿಯೂರಪ್ಪ ಎಲ್ಲಿದ್ದೀಯಪ್ಪ ಎಂದು ಟೀಕಿಸಿದ್ದ ಮಾಜಿ ಸಿಎಂ ಹೆಚ್,ಡಿ ಕುಮಾರಸ್ವಾಮಿಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ರೇಣುಕಾಚಾರ್ಯ, ನಿಖಿಲ್ ಎಲ್ಲಿದೀಯಪ್ಪ ಅಂತ ಮಾಧ್ಯಮದವ್ರು ಹೈಲೈಟ್ ಮಾಡಿದ್ರು.  ಯಡಿಯೂರಪ್ಪ ಎಲ್ಲಿದೀಯಪ್ಪ ಅಂತಿದೀರಲ್ಲ. ಯಡಿಯೂರಪ್ಪ ಜಿಲ್ಲಾ ಪ್ರವಾಸ ಮಾಡ್ತಿದಾರೆ. ಪ್ರವಾಹ ಪೀಡಿತ ಜಿಲ್ಲೆಗಳ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಯಡಿಯೂರಪ್ಪ ಅಧಿಕಾರಕ್ಕಾಗಿ, ಕಾಲಹರಣಕ್ಕೆ ದೆಹಲಿಗೆ ಹೋಗಲಿಲ್ಲ. ಅಭಿವೃದ್ಧಿ ಸಂಬಂಧ ಕೇಂದ್ರದ ಸಚಿವರ ಭೇಟಿ‌ ಮಾಡಿದ್ರು. ಯಡಿಯೂರಪ್ಪ ಹೈಕಮಾಂಡ್ ಭೇಟಿ‌ ಮಾಡಿದ್ದರಲ್ಲಿ ತಪ್ಪೇನಿದೆ ? ಯಡಿಯೂರಪ್ಪ ವಿರುದ್ಧ ಟೀಕೆ ಮಾಡುವುದನ್ನ ನಿಲ್ಲಿಸಿ ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಅವ್ರು ನಾಡಿನ‌ ಜನತೆಗಾಗಿ ದೇವಸ್ಥಾನಗಳಿಗೆ ಭೇಟಿ‌ ಕೊಡಲಿಲ್ಲ. ಅಧಿಕಾರ ಹಿಡಿಯಲು ಕುಮಾರಸ್ವಾಮಿ ದೇವಸ್ಥಾನಕ್ಕೆ ಸುತ್ತಿದ್ರು. ಅಧಿಕಾರಕ್ಕಾಗಿ ಮಾಟ ಮಂತ್ರ ಮಾಡಿಸಿದವರು ನೀವು. ಜನತೆಗಾಗಿ ಹೋಮ ಹವನ ಮಾಡಿಸ್ಲಿಲ್ಲ ನೀವು ಎಂದು  ಶಾಸಕ ರೇಣುಕಾಚಾರ್ಯ ಹರಿಹಾಯ್ದರು.

ಸಿದ್ದರಾಮಯ್ಯ ತಮಗೆ ಪುನರ್ಜನ್ಮ ಕೊಟ್ಟ ಕ್ಷೇತ್ರಕ್ಕೆ ಯಾಕೆ ಭೇಟಿ ಕೊಡ್ತಿಲ್ಲ….

ಇದೇ ವೇಳೆ ಸಿದ್ದರಾಮಯ್ಯ ವಿರುದ್ದವೂ ಕಿಡಿಕಾರಿದ ಶಾಸಕ ರೇಣುಕಾಚಾರ್ಯ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ‌ ಯಾವ ರೀತಿ ಅಧಿಕಾರ ನಡೆಸಿದ್ರು ಅಂತ ಜನರಿಗೆ ಗೊತ್ತಿದೆ. ಮೈಸೂರು ಭಾಗ ಬಿಟ್ಟು ಉತ್ತರ ಕರ್ನಾಟಕಕ್ಕೆ ಸಿದ್ದರಾಮಯ್ಯ ಪ್ರವಾಸ ಮಾಡಲಿಲ್ಲ. ರೈತರ ಆತ್ಮಹತ್ಯೆ ಮಾಡಿಕೊಂಡಾಗ ಅವರ ಮನೆಗಳಿಗೆ ಸಿದ್ದರಾಮಯ್ಯ ಭೇಟಿ ಕೊಡಲಿಲ್ಲ. ಈಗ ಬಾದಾಮಿ ಕ್ಷೇತ್ರದಲ್ಲಿ ಪ್ರವಾಹ, ಮಳೆ ಇದೆ. ಸಿದ್ದರಾಮಯ್ಯ ತಮಗೆ ಪುನರ್ಜನ್ಮ ಕೊಟ್ಟ ಕ್ಷೇತ್ರಕ್ಕೆ ಯಾಕೆ ಭೇಟಿ ಕೊಡ್ತಿಲ್ಲ. ಪ್ರತಿಪಕ್ಷ ನಾಯಕರಿಗಿರುವ ಹೊಣೆಗಾರಿಕೆಯನ್ನ ಸಿದ್ದರಾಮಯ್ಯ ನಿಭಾಯಿಸಲಿ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಅನೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ರಾಜ್ಯದಲ್ಲಿ ಏಕಪಕ್ಷೀಯ ಸರ್ಕಾರ ಅಂತ ಪ್ರತಿಪಕ್ಷಗಳು ಟೀಕೆ ಮಾಡ್ತಿವೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಹತಾಶೆಯಿಂದ ಹೇಳಿಕೆ ಕೊಡ್ತಿದ್ದಾರೆ. ಪ್ರತಿಪಕ್ಷಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿದಾರೆ ಎಂದು ರೇಣುಕಾಚಾರ್ಯ ಟೀಕಿಸಿದರು.

ಬರಗಾಲ ಪೀಡಿತ ಪ್ರದೇಶಗಳಿಗೆ ಬಿಜೆಪಿ ಪ್ರತಿಪಕ್ಷ ಆಗಿದ್ದಾಗ ಪ್ರವಾಸ ಮಾಡಿದ್ರು ಯಡಿಯೂರಪ್ಪ. ಜಿಲ್ಲಾ ಪ್ರವಾಸ ಮಾಡಿ ಸರ್ಕಾರದ ಗಮನ ಸೆಳೆದಿದ್ರು.ಯಡಿಯೂರಪ್ಪ ಪ್ರತಿಪಕ್ಷ ನಾಯಕರಾಗಿಯೂ ಕರ್ತವ್ಯ ನಿಭಾಯಿಸಿದ್ರು.ಈಗ ಸಿಎಂ ಆಗಿ ಯಡಿಯೂರಪ್ಪ ತಮ್ಮ‌ ಜವಾಬ್ದಾರಿ ಉತ್ತಮವಾಗಿ ನಿರ್ವಹಿಸ್ತಿದ್ದಾರೆ. ಈಗ ಸಿದ್ದರಾಮಯ್ಯ ಪ್ರತಿ ಪಕ್ಷ ನಾಯಕರಾಗಿ ಕರ್ತವ್ಯ ನಿಭಾಯಿಸ್ತಿಲ್ಲ ಯಾಕೆ ? ಎಂದು ವಾಗ್ದಾಳಿ ನಡೆಸಿದರು.

ಸಚಿವ ಸಂಪುಟ ರಚನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ರೇಣುಕಾಚಾರ್ಯ, ಈ ಬಗ್ಗೆ ನನಗೆ ಗೊತ್ತಿಲ್ಲ ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಸಂಪುಟ ರಚನೆ ಬಗ್ಗೆ ಯಡಿಯೂರಪ್ಪನವ್ರು, ನಮ್ಮ ವರಿಷ್ಠರು ತೀರ್ಮಾನ ತಗೋತಾರೆ. ನಾನು ಸಚಿವ ಸ್ಥಾನಕ್ಕೆ ಲಾಬಿ ಮಾಡಲ್ಲ. ನಾವು ಯಾವ ಶಾಸಕರು ಸಚಿವ ಸ್ಥಾನಕ್ಕೆ ಲಾಬಿ ನಡೆಸಲ್ಲ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿರ್ತೀವಿ ಎಂದು ಹೇಳಿದರು.

Key words: Bangalore- bjp mla- Renukacharya-outrage- former cm- HDKumaraswamy- siddaramaiah