ಟೆಂಡರ್ ಗೋಲ್ಮಾಲ್ ಆರೋಪ: ಬಿಜೆಪಿ ಮತ್ತು ಕಾಂಗ್ರೆಸ್  ವಿರುದ್ಧ ಹೆಚ್.ಡಿಕೆ ವಾಗ್ದಾಳಿ.

kannada t-shirts

ಬೆಂಗಳೂರು,ಫೆಬ್ರವರಿ,15,2023(www.justkannada.in):  ರಾಜ್ಯ ಸರ್ಕಾರ ಟೆಂಡರ್ ನಲ್ಲಿ ಗೋಲ್ಮಾಲ್ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ, ಇವರ ಆತ್ಮಸಾಕ್ಷಿಯನ್ನ ಇವರೇ ಪ್ರಶ್ನೆ ಮಾಡಿಕೊಳ್ಳಬೇಕು. ಈ  ಭ್ರಷ್ಟಾಚಾರದ ಬಗ್ಗೆ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ರೀತಿ. ಈ ಪರ್ಸೆಂಟೇಜ್  ಕಥೆ ಎಲ್ಲರಿಗೂ ಗೊತ್ತು. ದಾಖಲೆ ಇಡಿ ಅಂದ್ರೆ ಕಾಂಗ್ರೆಸ್ ನವರು ಏನ್ ದಾಖಲೆ ಇಡ್ತಾರೆ. ಈ ಹಿಂದೆ ಬಿಜೆಪಿ ವಿರುದ್ಧ ನಾನು ದಾಖಲೆ ತಂದಿಟ್ಟೆ. ನನ್ನ ದಾಖಲೆಯಿಂದ ಕಾಂಗ್ರೆಸ್ ನವರು ಅನುಕೂಲ ಮಾಡಿಕೊಂಡರು. ಭ್ರಷ್ಟಾಚಾರದಲ್ಲಿ ಎರಡೂ ಪಕ್ಷ  ಒಬ್ಬರಿಗಿಂತ ಒಬ್ಬರು ಹೆಚ್ಚು ಎಂದು ಕಿಡಿಕಾರಿದರು.

Key words: Allegation – tender-fraud-HD Kumaraswamy -BJP – Congress.

website developers in mysore