ಅಭಿಮಾನಿಗಳ ‘ಈ ಕಾರ್ಯ’ ಕಂಡು ಭಾವುಕರಾದ ಕಿಚ್ಚ !

ಬೆಂಗಳೂರು, ಏಪ್ರಿಲ್ 21, 2021 (www.justkannada.in): 

ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳ ಈ ಕಾರ್ಯ ಕಂಡು ಭಾವುಕರಾಗಿದ್ದಾರೆ.

ಅಂದಹಾಗೆ ಅಭಿಮಾನಿಗಳು ಮಾಡಿದ ಕೆಲಸ ಏನೆಂದರೆ ಸುದೀಪ್ ಆರೋಗ್ಯದಲ್ಲಿ ಚೇತರಿಕೆಗಾಗಿ ದೇವರ ಮೊರೆ ಹೋಗಿದ್ದು…

ಹೌದು. ಅಭಿಮಾನಿಗಳ ಈ ನಿಸ್ವಾರ್ಥ ಪ್ರೀತಿ ಕಂಡು ಕಿಚ್ಚ ಭಾವುಕರಾಗಿದ್ದಾರೆ.

ಚನ್ನಗಿರಿ ತಾಲೂಕಿನ ಕಿಚ್ಚ ಸುದೀಪ್ ಅಭಿಮಾನಿಗಳು ಕಿಚ್ಚನ ಆರೋಗ್ಯ ಸುಧಾರಿಸಲು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.

ವಿಶೇಷಚೇತನ ಅಭಿಮಾನಿ ದೇವರಿಗೆ ದೀರ್ಘದಂಡ ನಮಸ್ಕಾರ ಹಾಕಿ ಪ್ರಾರ್ಥನೆ ಸಲ್ಲಿಸಿದ್ದ ವೀಡಿಯೋ ಕಂಡು ಸುದೀಪ್ ಭಾವುಕರಾಗಿದ್ದಾರೆ.