ಬೆಂಗಳೂರು,ಜೂನ್,9,2026 (www.justkannada.in): ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ರಾಜ್ಯಸಭಾ ಟಿಕೆಟ ನೀಡದಿರುವುದು ಜೆಡಿಎಸ್ ಗೆ ಮಾಡಿರುವ ಅಪಮಾನ ಎಂದು ಮಾಜಿ ಸಚಿವ ಕೆ.ಎನ್ ರಾಜಣ್ಣ ಟೀಕಿಸಿದರು.
ಈ ಕುರಿತು ಮಾತನಾಡಿದ ಮಾಜಿ ಸಚಿವ ಕೆ.ಎನ್ ರಾಜಣ್ಣ, ಹೆಚ್ ಡಿ ದೇವೇಗೌಡರಿಗೆ ಅವಕಾಶ ಕೊಡಬೇಕಿತ್ತು ಇಳಿ ವಯಸ್ಸಿನಲ್ಲಿ ರಾಜಕೀಯ ಅಂತ್ಯ ಸುಗಮ ರೀತಿಯಲ್ಲಿ ಆಗಿಲ್ಲ. ಜೆಡಿಎಸ್ ಪಕ್ಷಕ್ಕೆ ಮಾಡಿರುವ ಅಪಮಾನ ಅಂತಾ ಭಾವಿಸುತ್ತೇನೆ ಎಂದರು.
ಕಳೆದ ಬಾರಿ ಹೆಚ್ ಡಿ ದೇವೇಗೌಡರನ್ನ ಗೆಲ್ಲಿಸಿದ್ದು ಕಾಂಗ್ರೆಸ್. ಹೆಚ್ ಡಿ ದೇವೇಗೌಡರು ನಮ್ಮ ಪರ ಮಾತನಾಡುತ್ತಾರೆಂದು ಅಂದುಕೊಂಡಿದ್ದವು ಅದರೆ ಹೆಚ್ ಡಿಡಿ ಬಿಜೆಪಿ ಪರವಾಗಿ ಮಾತನಾಡಿದರು ಎಂದು ಕೆಎನ್ ರಾಜಣ್ಣ ಹೇಳಿದರು.
Key words: Former PM, HD Devegowda JDS, K.N. Rajanna







