ಕಾಲುವೆಯಲ್ಲಿ ಈಜಲು ಹೋಗಿದ್ದ ಐವರು ನೀರುಪಾಲು.

ಮಂಡ್ಯ,ಏಪ್ರಿಲ್,25,2023(www.justkannada.in): ಕಾಲುವೆಯಲ್ಲಿ ಈಜಲು ಹೋಗಿದ್ದ ಐವರು ನೀರುಪಾಲಾದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯ ತಾಲ್ಲೂಕಿನ ದೊಡ್ಡಕೊತ್ತಗೆರೆ ಬಳಿ ಈ ಘಟನೆ ನಡೆದಿದೆ.  ಮಹೆತಾ, ತಸ್ಮಿಯಾ, ಅಶ್ರಕ್, ಅತೀಕ್  ಮೃತಪಟ್ಟವರು. ಮೃತರು ಬೆಂಗಳೂರು ನೀಲಸಂದ್ರ ಮೂಲದವರು ಎನ್ನಲಾಗಿದೆ. ರಂಜಾನ್ ಬಳಿಕ ಹಲ್ಲಗೆರೆ ಗ್ರಾಮಕ್ಕೆ ಅಜ್ಜಿ ಮನೆಗೆ ಬಂದಿದ್ದರು.

ಈ ನಡುವೆ ಇಂದು ವಿಸಿ ನಾಲೆಯಲ್ಲಿ ಐವರು ಈಜಲು ಇಳಿದಿದ್ದು ಈ ವೇಳೆ ನೀರುಪಾಲಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಮೂವರ ಶವ ಹೊರತೆಗೆದಿದ್ದು ಇಬ್ಬರ ಶವಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.

Key words: Five –people-death  -swimming – canal-mandya