ಕಾಲ್ತುಳಿತದಲ್ಲಿ 11 ಜನರ ಸಾವು ಪ್ರಕರಣ: RCB ಮ್ಯಾನೇಜ್ ಮೆಂಟ್ ವಿರುದ್ದ ‍FIR

ಬೆಂಗಳೂರು,ಜೂನ್,5,2025 (www.justkannada.in):  ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಸಿಬಿ ಮ್ಯಾನೇಜ್ ಮೆಂಟ್ ವಿರುದ್ದ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್ ಸಿಬಿ ಮ್ಯಾನೇಜ್ ಮೆಂಟ್ ವಿರುದ್ದಎಫ್ ಐಆರ್ ದಾಖಲಾಗಿದೆ.  ಎ1 ಆರ್ ಸಿಬಿ ಮ್ಯಾನೇಜ್ ಮೆಂಟ್ ಎ2 ಡಿಎನ್ ಎ ಇವೆಂಟ್ ಮ್ಯಾನೇಜ್ ಮೆಂಟ್ ಎ3 ಕೆಎಸ್ ಸಿಎ ಆಗಿದೆ.

ಪ್ರಕರಣ ಸಂಬಂಧ ಬೆಳಿಗ್ಗೆ ಯುಡಿಆರ್ ದಾಖಲಿಸಲಾಗಿತ್ತು. ಇದೀಗ ದುರಂತ ನಡೆದ 24 ಗಂಟೆ ಬಳಿಕ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.vtu

Key words: 11 death Case, FIR, against, RCB, Management