ಮೈಸೂರು, ಅಕ್ಟೋಬರ್,13,2025 (www.justkannada.in): ಬಲಿಜ ವಿದ್ಯಾರ್ಥಿನಿಲಯದ ಮೊದಲ ಹಂತದ ಕಟ್ಟಡವನ್ನು ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದು ಮಾಜಿ ಸಚಿವ ಡಾ.ಎಂ.ಆರ್.ಸೀತಾರಾಂ ಭರವಸೆ ನೀಡಿದರು.
ನಗರದ ಸರಸ್ವತಿಪುರಂನಲ್ಲಿರುವ ಬಣಜಿಗ ಸಮುದಾಯದ ವಿದ್ಯಾರ್ಥಿನಿಲಯದಲ್ಲಿ ಶ್ರೀ ಯೋಗಿನಾರೇಯಣ ಬಣಜಿಗ (ಬಲಿಜ) ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ-ವಧು ವರರ ಸಮಾವೇಶವನ್ನು ಉದ್ಘಾಟಿಸಿ ಡಾ.ಎಂ.ಆರ್.ಸೀತಾರಾಂ ಅವರು ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದೇನೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯ ನಿರ್ಮಿಸಿ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಈಗ ಮೈಸೂರಿನ ವಿದ್ಯಾರ್ಥಿನಿಲಯದ ಕಟ್ಟಡವನ್ನು ಅಭಿವೃದ್ಧಿ ಪಡಿಸಲಾಗುವುದು. ಮೊದಲ ಮಹಡಿಯ ಕೊಠಡಿಗಳ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ಕೊಡಲಾಗುವುದು ಎಂದು ಹೇಳಿದರು.
ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದು ಸಮುದಾಯಕ್ಕೆ ನಾವು ಮಾಡುತ್ತಿರುವ ಸಾರ್ಥಕದ ಸೇವೆ ಎಂದುಕೊಂಡಿದ್ದೇನೆ. ಸಮುದಾಯದ ಹಣವಂತರು ಧನ ಸಹಾಯ ಮಾಡಬೇಕು. ಮದ್ಯಮ ವರ್ಗದವರು ತಮ್ಮ ಕೈಲಾದಷ್ಟು ಸಹಕಾರ ನೀಡಬೇಕು ಎಂದು ಹೇಳಿದರು.
ಮೈಸೂರಿನ ಜಿಲ್ಲಾ ಬಣಜಿಗ (ಬಲಿಜ) ಸಂಘದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಪ್ರಾಮಾಣಿಕವಾಗಿ ಸಮುದಾಯದ ಕೆಲಸವನ್ನು ಮಾಡುವ ಸಂಘ-ಸಂಸ್ಥೆಗಳಿಗೆ ಸಂಪೂರ್ಣ ಪ್ರೋತ್ಸಾಹ ನೀಡಬೇಕಾದ ಸಮುದಾಯದ ಪ್ರತಿಯೊಬ್ಬರ ಕರ್ತವ್ಯ. ಬೆಳೆಯುತ್ತಿರುವ ಸಮುದಾಯಕ್ಕೆ ಹೆಚ್ಚಿನ ಪಾಲುದಾರಿಕೆ ಮಾಡಬೇಕು. ಈ ಕಟ್ಟಡದ ಮೇಲೆ ಹಳೆ ಕಟ್ಟಡವಾಗಿದೆ. ಹೆಚ್ಚಿನ ಪ್ರೋತ್ಸಾಹ ಮಾಡುತ್ತೇವೆ. ಯುವ ಪೀಳಿಗೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಶ್ರೀ ಯೋಗಿನಾರೇಯಣ ಬಣಜಿಗ (ಬಲಿಜ) ಸಂಘದ ಜಿಲ್ಲಾಧ್ಯಕ್ಷ ಎಂ.ನಾರಾಯಣ ಮಾತನಾಡಿ, ದಶಕಗಳಿಂದ ಸಂಘದ ಅಭಿವೃದ್ಧಿ ಸಲಹೆ ಸಹಕಾರವನ್ನು ನೀಡುತ್ತ ಬರಲಾಗುತ್ತಿದೆ. ಎಚ್.ಎ.ವೆಂಕಟೇಶ್ ಸಮುದಾಯದ ಮೇಲೆ ಕಾಳಜಿ ಹೊಂದಿದ್ದಾರೆ. ಸಂಘದ ನಿರ್ದೇಶಕರ ಸಹಕಾರದಿಂದ ಬಣಜಿಗ ಸಂಘವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಜಿಲ್ಲೆಯಲ್ಲಿ ಸಮುದಾಯವೂ ಹಿಂದುಳಿದಿದೆ. ಕೈಗಾರಿಕೋದ್ಯಮಿ, ಸ್ಥಿತಿವಂತರು ಈ ಭಾಗದಲ್ಲಿ ಇಲ್ಲ. ರೈತಾಪಿ ವರ್ಗದವರೇ ಹೆಚ್ಚು ಇದ್ದು, ಸಂಸಾರ ನಿರ್ವಹಣೆ ಮಾಡಲು ಕಷ್ಟವಾಗಿದೆ. ಹೀಗಿದ್ದರೂ ಸಮುದಾಯದ ಏಳಿಗೆಗೆ ಹಣ ನೀಡುತ್ತಿರುವುದು ಶ್ಲಾಘನೀಯ.
ಅರಗು ಮತ್ತು ಬಣ್ಣದ ಕಾರ್ಖಾನೆಯ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಮಾತನಾಡಿ, ಸಂಘದ ಆಡಳಿತ ಮಂಡಳಿಯ ಪ್ರಮಾಣಿಕತೆಯಿಂದ ಅತ್ಯುತ್ತಮ ಕೆಲಸ ಮಾಡಲು ಸಹಕಾರವಾಗಿದೆ. ಈ ಕಟ್ಟಡದ ನಿರ್ವಹಣೆಗೆ ಡಾ.ಎಂ.ಆರ್.ಸೀತಾರಾಂ ಅವರು ದಯೆ ತೋರಬೇಕು ಎಂದು ಮನವಿ ಮಾಡಿದೆ. ಅದಕ್ಕೆ ಅವರು ಸಮ್ಮತಿ ಸೂಚಿಸಿ ಭರವಸೆ ನೀಡಿದ್ದಾರೆ. ವಸತಿ ನಿಲಯದ ಸಂಪೂರ್ಣ ಕಟ್ಟಡ ಕಟ್ಟಿಸಿಕೊಡಬೇಕು . ಆ ಮೂಲಕ ಈ ಭಾಗದಲ್ಲಿ ಸೀತಾರಾಂ ಅವರ ಹೆಸರು ಸದಾ ಉಸಿರಾಗಿಲಿದೆ ಎಂದು ಹೇಳಿದರು.
ಮಂಡ್ಯ ಸಂಘದ ಅಧ್ಯಕ್ಷ ಕೆ.ಎನ್.ಮೋಹನ್ ಕುಮಾರ್, ಪಾಂಡುರಂಗ, ಆರ್.ಬಾಲರಾಜು, ಎಂ.ನಾಗರಾಜು, ಟಿ.ಎಸ್.ರಮೇಶ್, ಮೈಸೂರು ಸಂಘದ ಉಪಾಧ್ಯಕ್ಷ ಜಿ.ರಮೇಶ್, ಪ್ರಧಾನ ಕಾರ್ಯದರ್ಶಿ ಎಚ್.ಆರ್. ಗೋಪಾಲಕೃಷ್ಣ, ಸಹಕಾರ್ಯದರ್ಶಿ ಚೆಲುವರಾಜು, ಖಜಾಂಚಿ ಕೆ. ಚಂದ್ರಶೇಖರ, ನಿರ್ದೇಶಕರಾದ ಎಚ್.ವಿ.ನಾಗರಾಜ, ಎಚ್.ಎಸ್. ಕೃಷ್ಣಪ್ಪ, ಎನ್.ಹೇಮಂತಕುವಾರ್, ಎಚ್.ಕೆ. ಜಗನಾಥ್, ಡಾ.ಟಿ.ರಮೇಶ್, ಡಾ.ಎಸ್.ಕೃಷ್ಣಪ್ಪ, ಕೆ.ಎನ್. ವಿಜಯಕೊಪ್ಪ, ಗೋಪಾಲಕೃಷ್ಣ, ಎನ್. ವಿಜಯಕುಮಾರ್, ನಂಜಪ್ಪ, ಕೆ.ಸಿ.ಪ್ರಕಾಶ್, ಎಂ.ಆರ್.ಗಿರೀಶ್, ಬಿ.ಎಸ್. ಗುರುಮೂರ್ತಿ, ಎ.ಚೆನ್ನಕೇಶವ, ಬಿ.ಕೆ. ಸುರೇಶ್, ಎಂ.ವಿ. ವೆಂಕಟೇಶ್, ಕೆ.ಜನಾರ್ಧನ, ವ್ಯವಸ್ಥಾಪಕ ಎಚ್.ಆರ್. ವೆಂಕಟೇಶ್, ಮೇಲ್ವಿಚಾರಕ ರಾಮಕೃಷ್ಣಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Key words: support, Balija, Student, Mysore, Former Minister, Dr. M.R. Seetharam