ಪಾಪ ಕುಮಾರಸ್ವಾಮಿ ಎನ್ ಡಿಎ ಆಹ್ವಾನಕ್ಕೆ ಕಾಯ್ತಿದಿದ್ದಾರೆ, ಒಳ್ಳೆಯದಾಗಲಿ; ಅಧಿಕಾರಿಗಳ ದುರ್ಬಳಕೆ ಆರೋಪಕ್ಕೆ ಡಿ.ಕೆ ಶಿವಕುಮಾರ್ ತಿರುಗೇಟು..

ಬೆಂಗಳೂರು,ಜುಲೈ,18,2023(www.justkannada.in):  ಮಹಾಘಟಬಂಧನ ಸಭೆಗಾಗಿ ಹೊರಗಿನ ರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ ಅಧಿಕಾರಿಗಳನ್ನ ಬಳಸಿಕೊಂಡಿದ್ದಕ್ಕೆ ಟ್ವೀಟ್ ಮೂಲಕ ಚಾಟಿ ಬೀಸಿದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಕುಮಾರಸ್ವಾಮಿಗೆ ಉತ್ತರ ಕೊಡಲು  ಹೋಗಲ್ಲ. ನಾವು ಅಧಿಕಾರಿಗಳನ್ನ ದುರ್ಬಳಕೆ ಮಾಡಿಕೊಂಡಿಲ್ಲ ಶೀಷ್ಟಾಚಾರಾ ಪ್ರಕಾರ ಅಧಿಕಾರಿಗಳನ್ನ ನಡೆಸಿಕೊಂಡಿದ್ದೇವೆ ಎಂದರು.

ಹೆಚ್.ಡಿಕೆಗೆ ಮಾತನಾಡಲು ಯಾವುದೇ ನ್ಯೂಸ್ ಇಲ್ಲ. ಕುಮಾರಣ್ಣ ಮಾತಾಡ್ತಾರೆ ಅವರಿಗೂ ಸುದ್ದಿ ಆಗಬೇಕಲ್ವಾ..? ಎಂದು ವ್ಯಂಗ್ಯವಾಡಿದ ಡಿ.ಕೆ ಶಿವಕುಮಾರ್,  ಪಾಪ  ಹೆಚ್.ಡಿ ಕುಮಾರಸ್ವಾಮಿ  ಎನ್ ಡಿಎ ಆಹ್ವಾನಕ್ಕೆ ಕಾಯ್ತಿದಿದ್ದಾರೆ ಒಳ್ಳೆಯದಾಗಲಿ. ಸರ್ಕಾರ ಇರುತ್ತೆ ಹೋಗುತ್ತೆ ಎಂದು ಲೇವಡಿ ಮಾಡಿದರು.

Key words: DK Shivakumar – HD Kumaraswamy-allegations – officials-serve