ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ: ಸಿಎಂ ಸಿದ್ದರಾಮಯ್ಯಗೆ ಸವಾಲೆಸೆದ ಶಾಸಕ ಜಿಟಿ ದೇವೇಗೌಡ.

ಮೈಸೂರು,ಏಪ್ರಿಲ್,3, 2024 (www.justkannada.in): ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದು ಏನು ಕಡಿದು ಕಟ್ಟೆ ಹಾಕಿದ್ದಾನೆ ಎಂದು ತಮ್ಮ ವಿರುದ್ದ ವಾಗ್ದಾಳಿ ನಡೆಸಿದ್ದ ಸಿಎಂ ಸಿದ್ದರಾಮಯ್ಯಗೆ ಶಾಸಕ ಜಿ.ಟಿ ದೇವೇಗೌಡರು ತಿರುಗೇಟು ನೀಡಿದ್ದಾರೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ಚಾಮುಂಡೇಶ್ವರಿ ಕ್ಷೇತ್ರದ  ಅಭಿವೃದ್ದಿಗೆ ಸಿಎಂ ಸಿದ್ದರಾಮಯ್ಯ ಏನು ಮಾಡಲಿಲ್ಲ.  ನಾನು ಎಷ್ಟು ಕಟ್ಟೆ ಕಟ್ಟಿದ್ದೇನೆ ತೋರಿಸುತ್ತೇನೆ.  ಇವರು ಎಷ್ಟು ಕಟ್ಟೆ ಕಟ್ಟಿದ್ದಾರೆಂದು ತೋರಿಸಲಿ  ಎಂದು ಸಿಎಂ ಸಿದ್ದರಾಮಯ್ಯಗೆ ಸವಾಲು ಹಾಕಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೆಸರಿಗೆ ಮಾತ್ರ ನಾನು ಶಾಸಕ. ಯತೀಂದ್ರ ನಮ್ಮ ಕ್ಷೇತ್ರದಲ್ಲಿ ಕಮಿಷನ್ ದಂಧೆ ನಡೆಸುತ್ತಿದ್ದಾರೆ. ಗುತ್ತಿಗೆದಾರರು ಸಿಎಂ ಪುತ್ರನಿಗೆ ಕಮಿಷನ್ ಕೊಡಬೇಕು. ಕಾಂಗ್ರೆಸ್ ಸರ್ಕಾರ 60 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕಿಡಿಕಾರಿದರು.

ಜಿಟಿಡಿ ಏನು ಕಡಿದು ಕಟ್ಟೆ ಹಾಕಿದ್ದಾನೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.  ಎಷ್ಟು ದಿನ ನೀವು ಸಿಎಂ ಆಗಿರುತ್ತೀರಿ. ನಿಮ್ಮ ಬಗ್ಗೆ ನಾನು ಗೌರವ ಇಟ್ಟುಕೊಂಡಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ನೀವೇನು ಮಾಡಿದ್ದೀರಿ ಒಬ್ಬ ಅಧಿಕಾರಿಯನ್ನ ಬಿಟ್ಟಿದ್ದೀರಾ.  ತಮಗೆ ಬೇಕಾಗಿರುವ ಅಧಿಕಾರಿಗಳನ್ನ ಹಾಕಿಕೊಂಡಿದ್ದಾರೆ ವರ್ಗಾವಣೆ ಧಂಧೆಯಾಗಿದೆ . ವರುಣಾದಲ್ಲಿ ನೀವೇನು ಸುಮ್ಮನೆ ಗೆಲ್ಲಲಿಲ್ಲ ಎಂದು ವಾಗ್ದಾಳಿ ನಡೆಸಿದರು.

Key words: Development, CM Siddaramaiah, GT Deve Gowda