Tuesday, August 4, 2026

BDA Apartments

Home Front Page ರಾಜೀನಾಮೆ ನೀಡುವಂತೆ ವಿಪಕ್ಷಗಳ ಆಗ್ರಹ: ತಿರುಗೇಟು ಕೊಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್

ರಾಜೀನಾಮೆ ನೀಡುವಂತೆ ವಿಪಕ್ಷಗಳ ಆಗ್ರಹ: ತಿರುಗೇಟು ಕೊಟ್ಟ ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು,ಜೂನ್,6,2025 (www.justkannada.in):  ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು  ರಾಜೀನಾಮೆ ನೀಡುವಂತೆ ಆಗ್ರಹಿಸಿದ ವಿಪಕ್ಷಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಜೆಡಿಎಸ್ ಮತ್ತು ಬಿಜೆಪಿ ನಾಯಕರು ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಇಷ್ಟಕ್ಕೂ ನನ್ನ ರಾಜೀನಾಮೆ ಕೇಳಲು ನನ್ನದೇನು ತಪ್ಪಿದೆ? ಬೆಂಗಳೂರು ಉಸ್ತುವಾರಿ ಸಚಿವನಾಗಿ ಸ್ಟೇಡಿಯಂ ಗೆ ಹೋಗಿದ್ದೆ, ಅದು ತಪ್ಪಾ? ಆರ್ ಸಿಬಿ ತಂಡ ಐಪಿಎಲ್ ಗೆದ್ದು ಬೆಂಗಳೂರಿಗೆ ಬಂದಾಗ ಅವರನ್ನು ಬರಮಾಡಿಕೊಳ್ಳಲು ಏರ್ ಪೋರ್ಟ್ ಗೆ ಹೋಗಿದ್ದು ತಪ್ಪಾ? ಬೆಂಗಳೂರು ಸಚಿವನಾಗಿ ಇದನ್ನು ಮಾಡಿದ್ದು ತಪ್ಪು ಎಂದು ಹೇಳುವುದು ಸರಿಯಲ್ಲ ಎಂದರು.

ಹೆಣದ ಮೇಲೆ ಜೆಡಿಎಸ್ ಬಿಜೆಪಿ ರಾಜಕಾರಣ  ಮಾಡುತ್ತಿದೆ.  ಅವರ ಮಾತುಗಳಿಗೆ ಉತ್ತರ ಕೊಡುತ್ತೇನೆ. ರಾಜೀನಾಮೆ ಕೇಳುತ್ತಿದ್ದಾರೆ ಕೊಡೋಣ. ಹೆಚ್ ಡಿಕೆಗೆ ನನ್ನ ಮೇಲೆ ಲವ್. ಹೆಚ್ ಡಿಕೆ ನನ್ನ ರಾಜೀನಾಮೆ ಕೇಳ್ತಿದ್ದಾರೆ ಕೊಡೋಣ ಎಂದು ವ್ಯಂಗ್ಯವಾಡಿದರು.vtu

Key words: Opposition parties, demand, resignation, DCM, D.K. Shivakumar