ಕೊಲೆ ಕೇಸ್ ನಲ್ಲಿ ನಟ ದರ್ಶನ್ ಅರೆಸ್ಟ್ ಆಗಿ ಇಂದಿಗೆ ಒಂದು ವರ್ಷ

ಮೈಸೂರು,ಜೂನ್,11,2025 (www.justkannada.in): ಅಂದು 2024 ಜೂನ್ 11 ರ ಬೆಳಿಗ್ಗೆ ಅಚ್ಚರಿ ಸುದ್ದಿಯೊಂದು ಹರಿದಾಡಿತ್ತು. ಅದು ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ಎಂದೇ ಕರೆಸಿಕೊಂಡಿರುವ  ನಟ ದರ್ಶನ್ ಬಂಧನ. ಈ ವಿಚಾರ ನಟ ದರ್ಶನ್ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಏಕೆಂದರೇ  ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ರನ್ನು ಪೊಲೀಸರು ಬಂಧಿಸಿದ್ದರು. ಅದು ಮೈಸೂರಿನಲ್ಲಿ.  ಈ ಘಟನೆ ನಡೆದು ಇಂದಿಗೆ ಒಂದು ವರ್ಷ ಕಳೆದಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಟ ದರ್ಶನ್  ರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.   9.6.2024 ರಿಂದ ಮೈಸೂರಿನಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ನಲ್ಲಿ ನಟ ದರ್ಶನ್ ತೊಡಗಿದ್ದರು.  ಮೈಸೂರಿನ ಲಲಿತಾ ಮಹಲ್ ಪ್ಯಾಲೇಸ್ ನಲ್ಲಿ ಡೆವಿಲ್  ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಈ ಮಧ್ಯೆ 10.6.2024 ರಂದು ಶೂಟಿಂಗ್ ಮುಗಿಸಿ ನಟ ದರ್ಶನ್ ಹೋಟೆಲ್ ನಲ್ಲಿ ತಂಗಿದ್ದರು. ಬಳಿಕ  11.6.2024 ರಂದು ಬೆಳಿಗ್ಗೆ ಎಂದಿನಂತೆ ಎದ್ದು ಜಿಮ್ ಗೆ ತೆರಳಿದ್ದ ನಟ ದರ್ಶನ್ ಕುವೆಂಪುನಗರ ಗೋಲ್ಡ್ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದರು.  7 ಗಂಟೆಯಿಂದ 8 ಗಂಟೆವರೆಗೂ ವರ್ಕ್ ಔಟ್ ಮಾಡಿದ್ದ ದರ್ಶನ್, ಬಳಿಕ ಫ್ರೆಶ್ ಜ್ಯೂಸ್ ಕುಡಿದು ತಿಂಡಿಗೆ ತೆರಳಿದ್ದರು.

ತಿಂಡಿ ತಿಂದು ಹೋಟೆಲ್ ಗೆ ತೆರಳುವ  ಮಧ್ಯದಲ್ಲಿ ಪೊಲೀಸರು ನಟ ದರ್ಶನ್ ರನ್ನು ವಶಕ್ಕೆ ಪಡೆದು ದರ್ಶನ್ ತಂಗಿದ್ದ ಹೋಟೆಲ್ ಬಳಿ ಕರೆದೊಯ್ದು ಅಲ್ಲಿಂದ ತಮ್ಮ ಪೊಲೀಸ್ ವಾಹನದಲ್ಲೇ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು.

ಈ ವೇಳೆ ನಟ ದರ್ಶನ್ ನಾನು ಸ್ನಾನ ಮುಗಿಸಿ ಡ್ರೆಸ್  ಬದಲಿಸಿ ತ ರೇಂಜ್ ರೋವರ್ ಕಾರಿನಲ್ಲಿ ಬರುವುದಾಗಿ ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡದೇ ಸುಮ್ಮನೆ ನಮ್ಮ ಕಾರು ಹತ್ತಿ ಎಂದು ಆವಾಜ್ ಹಾಕಿದ್ದರು. ಮೈಸೂರಿನಿಂದ ಬೆಳಿಗ್ಗೆ 8.30ಕ್ಕೆ ನಟ ದರ್ಶನ್ ರನ್ನು  ಅರೆಸ್ಟ್ ಮಾಡಿ ಬೆಂಗಳೂರಿಗೆ  ಕರೆದೊಯ್ದಿದ್ದರು. ಇದೀಗ ನಟ ದರ್ಶನ್ ಅರೆಸ್ಟ್ ಆಗಿ ಒಂದು ವರ್ಷ ಕಳೆದಿದ್ದು, ಪ್ರಕರಣ ಸಂಬಂಧ ಈಗಾಗಲೇ ನಟ ದರ್ಶನ್ ಜಾಮೀನು ಪಡೆದು ಹೊರ ಬಂದಿದ್ದಾರೆ.

ಏನಿದು ಪ್ರಕರಣ..

ನಟ ದರ್ಶನ್ ಆಪ್ತೆ ಎನಿಸಿಕೊಂಡಿದ್ದ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡಿ ಕಿರುಕುಳ ನೀಡಿದ್ದ ಎಂಬ ಆರೋಪವಿತ್ತು. ಈ ಕಾರಣಕ್ಕೆ ಬೆಂಗಳೂರಿಗೆ ರೇಣುಕಾಸ್ವಾಮಿಯನ್ನು ಕರೆಸಿ ಪಟ್ಟಣಗೆರೆ ಶೆಡ್ ​ನಲ್ಲಿ ಅವರನ್ನು ಹತ್ಯೆ ಮಾಡಿದ ಆರೋಪ ನಟ ದರ್ಶನ್ ಹಾಗೂ ಇತರ 16 ಆರೋಪಿಗಳ ಮೇಲೆ ಇದೆ. ಕೊಲೆ ಬಳಿಕ ಈ ಶವವನ್ನು ಮೋರಿ ಪಕ್ಕ ಎಸೆಯಲಾಗಿತ್ತು. ಆರಂಭದಲ್ಲಿ ದರ್ಶನ್ ಗ್ಯಾಂಗ್​ನ ಕೆಲವರು ಪೊಲೀಸರಿಗೆ ಹೋಗಿ ಶರಣಾಗತಿ ಆದರು ಮತ್ತು ಹಣದ ವಿಚಾರಕ್ಕೆ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡರು. ಆದರೆ, ಪೊಲೀಸರಿಗ ಆಗಲೇ ಅನುಮಾನ ಬಂದಿತ್ತು. ಶರಣಾದವರನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿದಾಗ ವಿಚಾರ ಬೆಳಕಿಗೆ ಬಂದಿತ್ತು.vtu

Key words: Renukaswamy, murder case, one year, actor, Darshan, arrest