ನಾಗಮಂಗಲದಲ್ಲಿ ಕೋವಿಡ್ ಸೊಂಕಿಗೆ ಕಾರಣವಾದ ಮುಂಬೈ ಮೂಲದ ವ್ಯಕ್ತಿ..

ಮಂಡ್ಯ, ಏ.27, 2020 : (www.justkannada.in news ) : ಮುಂಬೈನಿಂದ ಬಂದ ನಾಗಮಂಗಲ ಮೂಲದ ವ್ಯಕ್ತಿಗೆ ಕರೋನ ಸೋಂಕು ಧೃಡ.ನಾಗಮಂಗಲ ತಾಲೂಕಿನ ಸಾತೇನಹಳ್ಳಿ ಗ್ರಾಮದ 50 ವರ್ಷದ ವ್ಯಕ್ತಿಗೆ (P-505) ಸೋಂಕು.

ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಸೋಂಕಿತ. ಲಾಕ್‌ಡೌನ್ ಇದ್ರು ಅಧಿಕಾರಿಗಳ ಕಣ್ತಪ್ಪಿಸಿ ಏ.22ರಂದು ಗ್ರಾಮಕ್ಕೆ ಆಗಮನ. ಅಗತ್ಯ ಸೇವೆಗಳ ಟ್ರಕ್, ಬೈಕ್‌ಗಳ ಸಹಾಯಪಡೆದು ಮುಂಬೈನಿಂದ ಸಾತೇನಹಳ್ಳಿಗೆ ಬಂದಿದ್ದ ವ್ಯಕ್ತಿ.

covid-corona-nagamangala-hotel-bombay-quarentine

ಮುಂಬೈನಿಂದ ವ್ಯಕ್ತಿ ಬರ್ತಿದ್ದಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ಗ್ರಾಮಸ್ಥರು. ಏ.24ರಂದು ವ್ಯಕ್ತಿಯ ಗಂಟಲು ದ್ರವ ಪರೀಕ್ಷೆ. ಇಂದು ಬಂದ ರಿಪೋರ್ಟ್‌ನಲ್ಲಿ ಕೊರೊನಾ ಪಾಸಿಟಿವ್.

ಪಾಸಿಟಿವ್ ಬರ್ತಿದ್ದಂತೆ ಸಾತೇನಹಳ್ಳಿ ಸೀಲ್ ಡೌನ್ . ಸೋಂಕಿತ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ಶಿಫ್ಟ್ ಮಾಡಿದ ಆರೋಗ್ಯಾಧಿಕಾರಿಗಳು. ಕುಟುಂಬಸ್ಥರನ್ನು ಕ್ವಾರೆಂಟೈನ್ ಮಾಡಿದ ಅಧಿಕಾರಿಗಳು. ಇದು ನಾಗಮಂಗಲದ ಮೊದಲ ಪಾಸಿಟಿವ್ ಪ್ರಕರಣ.
ಈಗ ಜಿಲ್ಲೆಯಲ್ಲಿ 17 ಕ್ಕೇರಿದ ಸೋಂಕಿತರ ಸಂಖ್ಯೆ. ಈ ಪೈಕಿ ಮಳವಳ್ಳಿ – 14 , ಮಂಡ್ಯ ನಗರ -1, ನಾಗಮಂಗಲ -1.

key words : covid-corona-nagamangala-hotel-bombay-quarentine