ಕಾರ್ಪೊರೇಟರ್ ಮನೆಗೆ ರಕ್ಷಣೆ ಕೊಡಲು ಆಗಿಲ್ಲ,  ರಾಜ್ಯಕ್ಕೆ ರಕ್ಷಣೆ ಕೊಡ್ತಾರಾ..? ಮಾಜಿ ಸಿಎಂ ಹೆಚ್.ಡಿಕೆ ವಾಗ್ದಾಳಿ.

ಮೈಸೂರು,ಏಪ್ರಿಲ್,20, 2024 (www.justkannada.in): ಕಾಂಗ್ರೆಸ್ ಕಾರ್ಪೋರೇಟರ್ ಮನೆಗೆ ರಕ್ಷಣೆ ಕೊಡಲು ಆಗದವರು ಇನ್ನು ರಾಜ್ಯಕ್ಕೆ ರಕ್ಷಣೆ ಕೊಡುತ್ತಾರೆಯೇ ಎಂದು ರಾಜ್ಯ ಸರ್ಕಾರದ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಈ ಸರ್ಕಾರ ಒಂದು ಸಮುದಾಯದ ಓಲೈಕೆಗೆ ಮುಂದಾಗಿದೆ ಇದೇ ಕಾರಣಕ್ಕೆ ಇಂತಹ ಘಟನೆಗಳು ನಡೆಯುತ್ತಿವೆ ಸಿಎಂ ಮತ್ತು ಗೃಹಸಚಿವರು ಮಾಹಿತಿ ಇಲ್ಲದೆ ಮಾತನಾಡಿದ್ದಾರೆ. ಮಾಹಿತಿ ತಿಳಿಯದೇ ಸೂಕ್ಷ್ಮತೆ ಅರಿತುಕೊಳ್ಳದೆ ಮಾತನಾಡಬಾರದು ಎಂದರು.

ರಾಜ್ಯ ಸರ್ಕಾರ ಖಜಾನೆ ಖಾಲಿಯಾಗಿದೆ.  11 ತಿಂಗಳಲ್ಲಿ ರಾಜ್ಯ ಬೊಕ್ಕಸ ಖಾಲಿ ಮಾಡಿದ್ದೇವೆ. ಹೀಗಾಗಿ  ಭಿಕ್ಷುಕರಾಗಿದ್ದೇವೆ ಎಂದು ಕಾಂಗ್ರೆಸ್ ನವರು ಚೊಂಬು ಹಿಡಿದಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Key words: corporator, protect, congress, HD Kumaraswamy