Tuesday, September 15, 2026

BDA Apartments

ಹಸಿವು ಮುಕ್ತ ರಾಜ್ಯ ಮಾಡಲು ಹೋರಾಟ: ಬಡವರ ಊಟದ ವಿಷಯದಲ್ಲಿ ಕೇಂದ್ರ ರಾಜಕೀಯ- ಡಿ...
Home Front Page ಹಸಿವು ಮುಕ್ತ ರಾಜ್ಯ ಮಾಡಲು ಹೋರಾಟ: ಬಡವರ  ಊಟದ ವಿಷಯದಲ್ಲಿ ಕೇಂದ್ರ ರಾಜಕೀಯ- ಡಿಸಿಎಂ ಡಿ.ಕೆ...

ಹಸಿವು ಮುಕ್ತ ರಾಜ್ಯ ಮಾಡಲು ಹೋರಾಟ: ಬಡವರ  ಊಟದ ವಿಷಯದಲ್ಲಿ ಕೇಂದ್ರ ರಾಜಕೀಯ- ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿ.

ಬೆಂಗಳೂರು,ಜೂನ್,20,2023(www.justkannada.in):  ನಾವು ಹಸಿವು ಮುಕ್ತ ರಾಜ್ಯ ಮಾಡಲು ಹೋರಾಟ ಮಾಡುತ್ತಿದ್ದೇವೆ. ಬಡವರ ಹಸಿವು ತಣಿಸಲು ಅಕ್ಕಿ ಕೇಳಿದ್ದೇವೆ. ಆದರೆ ಕೇಂದ್ರ ಸರ್ಕಾರ ಬಡವರ ಊಟದ ವಿಷಯದಲ್ಲೂ ರಾಜಕೀಯ ಮಾಡುತ್ತಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿಕಾರಿದರು.

ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿದ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ  ಇಂದು ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಿತು. ಅಕ್ಕಿ ಬೇಯಿಸುವ ಮೂಲಕ ಪ್ರತಿಭಟನೆ ನಡೆಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಈ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಆಹಾರ ಭಧ್ರತೆ ಕಾಯ್ದೆ ಜಾರಿಗೆ ತಂದಿದ್ದು ಕಾಂಗ್ರೆಸ್. ನಾವು ಹೇಳಿದಂತೆ 10 ಕೆಜಿ ಅಕ್ಕಿ ಕೊಟ್ಟು ಮಾತು ಉಳಿಸಿಕೊಳ್ಳುತ್ತೇವೆ. ಈ ಹಿಂದೆ ಕೇಂದ್ರ ಸರ್ಕಾರ ಅಕ್ಕಿ ಕೊಡುವುದಾಗಿ ಹೇಳಿತ್ತು. ಈಗ ಕೊಡಲ್ಲ ಅಂತಿದ್ದಾರೆ. ಕೇಂದ್ರದ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು. ಹಸಿವು ಮುಕ್ತ ರಾಜ್ಯ ಮಾಡಲು ಹೋರಾಟ protest1

ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಿದ್ದೇವೆ. ಶಕ್ರಿಯೋಜನೆಯಡಿ 3ಕೋಟಿ ಕೋಟಿ ಜನ ಪ್ರಯಾಣ  ಮಾಡಿದ್ದಾರೆ. ವಿಪಕ್ಷ ನಾಯಕರಿಗೆ ಟೀಕೆ ಮಾಡಬೇಡಿ ಎಂದು ಹೇಳಲ್ಲ  ನಾವು ತಪ್ಪು ಮಾಡಿದರೇ ವಿಪಕ್ಷದವರು ತಿದ್ದಲಿ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

Key words: congress protest- against-central-DCM-DK Shivakumar