ಡಿಕೆ ಶಿವಕುಮಾರ್ ವಿರುದ್ದದ ಸಿಬಿಐ ತನಿಖೆಗೆ ಅನುಮತಿ ವಾಪಸ್  ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ

ಬೆಂಗಳೂರು,ನವೆಂಬರ್,24,2023(www.justkannada.in): ಡಿಸಿಎಂ  ಡಿಕೆ ಶಿವಕುಮಾರ್ ವಿರುದ್ದದ ಸಿಬಿಐ ತನಿಖೆಗೆ ಅನುಮತಿ ವಾಪಸ್ ಪಡೆದ ವಿಚಾರವನ್ನ ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಬಿಜೆಪಿ ಅವರು ಕಾನೂನಿನ ಪ್ರಕಾರ ತನಿಖೆಯನ್ನ ಸಿಬಿಐಗೆ ನೀಡಿಲ್ಲ. ಡಿಕೆ ಶಿವಕುಮಾರ್ ವಿರುದ್ದ ತನಖೆಗೆ ಸ್ಪೀಕರ್ ರಿಂದ ಅನುಮತಿ ಪಡೆಯಬೇಕಿತ್ತು . ತನಿಖೆಗೆ ಸ್ಪೀಕರ್ ಅನುಮತಿ ಕೊಡಬೇಕಿತ್ತು . ಆದರೆ ಅಂದು ತನಿಖೆಗೆ ಸ್ಪೀಕರ್ ಅನುಮತಿ ನೀಡಿಲ್ಲ  ಹೀಗಾಗಿ  ತನಿಖೆಗೆ ಅನುಮತಿ ವಾಪಸ್ ಪಡೆಯಲಾಗಿದೆ ಎಂದರು.

Key words: CM Siddaramaiah- defends- withdrawal -permission – CBI investigation -against –DK Shivakumar