ಬಾಗಲಕೋಟೆ,ಏಪ್ರಿಲ್,3,2026 (www.justkannada.in): ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ತಮ್ಮ ಅಭ್ಯರ್ಥಿ ಉಮೇಶ್ ಮೇಟಿ ಪರ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ಸಿಎಂ ಸಿದ್ದರಾಮಯ್ಯ ಇಂದು ಟೆಂಪಲ್ ರನ್ ನಡೆಸಿದರು.
ಬಾಗಲಕೋಟೆಯ ಮಚಖಂಡಿಯಲ್ಲಿರುವ ವಿರಭಧ್ರೇಶ್ವರ ದೇಗುಲಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ವೀರಭದ್ರೇಶ್ವರನ ದರ್ಶನ ಪಡೆದರು. ಈ ವೇಳೆ ಅರ್ಚಕರ ಬಳಿಯೂ ಮತಯಾಚನೆ ಮಾಡಿದರು. ನಮ್ಮ ಅಭ್ಯರ್ಥಿಗೆ ಮತಹಾಕಿ ಎಂದು ಮನವಿ ಮಾಡಿದರು.
ಹಾಗೆಯೇ ಎಲ್ ಟಿಒನ್ ತಾಂಡಾದ ದುರ್ಗಾದೇವಿ ದೇವಾಲಯಕ್ಕೂ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ದೇವರ ದರ್ಶನ ಪಡೆದರು.
Key words: Bagalkote, Visit, Veerabhadreshwara Temple, CM Siddaramaiah







