ತಿಮ್ಮಾಪುರ ವಜಾ ಮಾಡಿ, ಇಲ್ಲ ಸಿಎಂ ರಾಜೀನಾಮೆ ನೀಡಲಿ- ಛಲವಾದಿ ನಾರಾಯಣಸ್ವಾಮಿ ಆಗ್ರಹ

ಬೆಂಗಳೂರು,ಜನವರಿ,27,2026 (www.justkannada.in): ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಸಂಬಂಧ ಸಚಿವ ಆರ್.ಬಿ ತಿಮ್ಮಾಪುರ ರಾಜೀನಾಮೆಗೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ವಿಧಾನ ಪರಿಷತ್ ನಲ್ಲಿ ಈ ಕುರಿತು ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಸಚಿವ ಸ್ಥಾನದಿಂದ ಆರ್.ಬಿ ತಿಮ್ಮಾಪುರ ಅವರನ್ನ  ವಜಾ ಮಾಡಬೇಕು ಇಲ್ಲವಾದರೆ ಸಿಎಂ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ಛಲವಾದಿ ನಾರಾಯಣಸ್ವಾಮಿ ಮಾತಿಗೆ ಸಿಟ್ಟಾದ ಸಚಿವ ಚಲುವರಾಯಸ್ವಾಮಿ ಈ ವೇಳೆ ಏನೇನೋ ಮಾತನಾಡಬೇಡಿ ಎಂದರು.  ಈ ಸಮಯದಲ್ಲಿ ನಾನು ಏನು ಮಾತನಾಡಬೇಕು ಎಂಬುದನ್ನು ನಿಮ್ಮಿಂದ  ಕಲಿಯಬೇಕಿಲ್ಲ  ನಮಗೆ ನೀವು ಹೇಳಲು ಬರಬೇಡಿ ಎಂದು ಛಲವಾದಿ ನಾರಾಯಣಸ್ವಾಮಿ ತಿರುಗೇಟು ಕೊಟ್ಟರು.   ಛಲವಾದಿ ಮಾತಿಗೆ ಸಚಿವ ಚಲುವರಾಯಸ್ವಾಮಿ, ಶಿವರಾಜ್ ತಂಗಡಗಿ ಗರಂ ಆದರು.  ಈ ವೇಳೆ ಮಧ್ಯಪ್ರವೇಶಿಸಿದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪದೇ ಪದೇ ಸಿಎಂ ಹೆಸರು ತೆಗೆದುಕೊಳ್ಳಬೇಡಿ ಎಂದು ಸೂಚನೆ ನೀಡಿದರು.

Key words: Dismiss, RB Thimmapura, demands, Chalavadi Narayanaswamy