Wednesday, August 5, 2026

BDA Apartments

Home Front Page ಕಾವೇರಿ ನದಿ ನೀರು ವಿವಾದ: ಇಂದು ಸುಪ್ರೀಂಕೋರ್ಟ್ ಹೊಸ ಪೀಠದಲ್ಲಿ ವಿಚಾರಣೆ.

ಕಾವೇರಿ ನದಿ ನೀರು ವಿವಾದ: ಇಂದು ಸುಪ್ರೀಂಕೋರ್ಟ್ ಹೊಸ ಪೀಠದಲ್ಲಿ ವಿಚಾರಣೆ.

ನವದೆಹಲಿ,ಆಗಸ್ಟ್,21,2023(www.justkannada.in): ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಬರದ ಛಾಯೆ ಆವರಿಸುತ್ತಿದೆ. ರೈತರು ಜನರಿಗೆ ನೀರಿನ ಅಭಾವ ಉಂಟಾಗಿದ್ದು ಈ ಮಧ್ಯೆಯೂ ತಮಿಳುನಾಡು ಸರ್ಕಾರ ಕಾವೇರಿ ನೀರಿಗಾಗಿ ಮತ್ತೆ ಕ್ಯಾತೆ ತೆಗೆದಿದ್ದು, ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ಇಂದು ನಡೆಯಲಿದೆ.

ಕಾವೇರಿ ನದಿ ನೀರು ವಿವಾದ ವಿಚಾರಣೆಗೆ ಹೊಸ ಪೀಠ ರಚನೆ ಮಾಡಲಾಗಿದ್ದು  ಇಂದೇ ಹೊಸ ಪೀಠದಿಂದ ವಿಚಾರಣೆ  ನಡೆಯಲಿದೆ ಎಂದು ಸುಪ್ರೀಂಕೋರ್ಟ್ ಸಿಜೆಐ ತಿಳಿಸಿದ್ದಾರೆ. ತಮಿಳುನಾಡು ಸರ್ಕಾರ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ವಾದ ಮಂಡನೆ ಮಾಡಲಿದ್ದಾರೆ.

ಇನ್ನು ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಡ್ಯಾಂಗಳು ಇನ್ನೂ ಭರ್ತಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ವಾಸ್ತವಸ್ಥಿತಿಯನ್ನ ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಡಲು ಸರ್ಕಾರ ಸಿದ್ಧತೆ ನಡೆಸಿದೆ.  ಕಾವೇರಿ ಜಲಾನಯನಪ್ರದೇಶದಲ್ಲಿ ಮಳೆಯಿಲ್ಲದೆ ಜನರು, ರೈತರು ತೊಂದರೆಗೀಡಾಗಿದ್ದಾರೆ.  ಕೆಆರ್ ಎಸ್ ಹೇಮಾವತಿ ಡ್ಯಾಂ ತುಂಬಿಲ್ಲ. ಬರದ ಪರಿಸ್ಥಿತಿಯಲ್ಲೂ ತಮಿಳುನಾಡು ಪಾಲು ಕೇಳುತ್ತಿದ್ದು, ಹೀಗಾಗಿ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ ಎಂಬ ವಿಚಾರವನ್ನ ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಲಿದೆ.

ಇತ್ತ ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದು ಕೆಆರ್ ಎಸ್ ಡ್ಯಾಂ ನೀರಿನ ಮಟ್ಟ ಇದೀಗ 105 ಅಡಿಗೆ ಇಳಿದಿದೆ ಎನ್ನಲಾಗಿದೆ.

Key words: Cauvery- river -water –dispute-Today – Supreme Court