Saturday, August 29, 2026

BDA Apartments

Home Front Page ರಾಜ್ಯ ಸರ್ಕಾರದ  ವೈಫಲ್ಯ ಒಪ್ಪಿ ಸಿಎಂ ಬದಲಾವಣೆಗೆ ನಿರ್ಧಾರ ಮಾಡಿದೆ- ಬಿವೈ ವಿಜಯೇಂದ್ರ

ರಾಜ್ಯ ಸರ್ಕಾರದ  ವೈಫಲ್ಯ ಒಪ್ಪಿ ಸಿಎಂ ಬದಲಾವಣೆಗೆ ನಿರ್ಧಾರ ಮಾಡಿದೆ- ಬಿವೈ ವಿಜಯೇಂದ್ರ

ಶಿವಮೊಗ್ಗ,ಮೇ,27,2026 (www.justkannada.in):  ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರದ ವೈಫಲ್ಯ ಒಪ್ಪಿ ಸಿಎಂ ಬದಲಾವಣೆಗೆ ನಿರ್ಧಾರ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ,, ಯಾರು ಸಿಎಂ ಆಗುತ್ತಾರೆ ಅನ್ನೋದು ಮುಖ್ಯವಲ್ಲ. ಸಿದ್ದರಾಮಯ್ಯ 10 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ರಾಜ್ಯ ಸರ್ಕಾರ ವೈಪಲ್ಯವನ್ನು ಕಾಂಗ್ರೆಸ್ ಹೈಕಮಾಂಡ್  ಒಪ್ಪಿದೆ.  ನಿನ್ನೆ ಸಿಎಂ ಬದಲಾವಣೆಗೆ ಹೈಕಮಾಂಡ್ ನಿರ್ಧಾರ ಮಾಡಿದೆ ಅಂತರಿಕ ಕಚ್ಚಾಟದಿಂದ ಆಡಳಿತ ಕುಸಿದಿದೆ ಎಂಧರು.

ಉಪಚುನಾವಣೆ ಯಾವುದೇ ಮಾನದಂಡ ಆಗುವುದಿಲ್ಲ.  ಉಪಚುನಾವಣೆ ಗೆದ್ದರೂ ಸಿಎಂ ರಾಜೀನಾಮೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಶೀಘ್ರವೇ ಚುನಾವಣೆ ಆಗಲಿದೆ ಎಂದು ಬಿವೈ ವಿಜಯೇಂದ್ರ  ತಿಳಿಸಿದರು.

Key words: State government, failure, change CM,  BY Vijayendra