ಬೆಂಗಳೂರು,ಫೆಬ್ರವರಿ,23,2026 (www.justkannada.in): ಸಿಎಂ ಸಿದ್ದರಾಮಯ್ಯರಿಂದ ಜಾತಿ ಕಾರ್ಡ್ ಪ್ಲೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಲೇವಡಿ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಬಿವೈ ವಿಜಯೇಂದ್ರ, ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಮೇಲೆ ಸಿಟ್ಟು ಕಡಿಮೆಯಾಗಿದೆ ಅವರ ಆಂತರಿಕ ಪಕ್ಷದಲ್ಲಿರುವವರ ಮೇಲೆ ಕೋಪ ಉಂಟಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕುರಿ ಕಾಯುವವರು ಸಿಎಂ ಆಗಿದ್ದಾರೆ ಸಂತೋಷ. ಆದರೆ ಈ ಬಾರಿ ಬಜೆಟ್ ನಲ್ಲಾದರೂ ಅನುದಾನ ಬಿಡುಗಡೆ ಮಾಡಲಿ. ಹಿಂದುಳಿದ ಸಮುದಾಯಗಳಿಗೆ ಅನುಕೂಲ ಮಾಡಿಕೊಡಿ ಎಂದು ಬಿವೈ ವಿಜಯೇಂದ್ರ ಆಗ್ರಹಿಸಿದರು.
Key words: CM Siddaramaiah, anger, BJP, BY Vijayendra







