Monday, August 3, 2026

BDA Apartments

Home Front Page ಧರ್ಮಸ್ಥಳ ಕೇಸ್: ಸದ್ಯಕ್ಕೆ ಎನ್ ಐಎ ತನಿಖೆ ಅವಶ್ಯಕತೆ ಇಲ್ಲ- ಬಸನಗೌಡ ಪಾಟೀಲ್ ಯತ್ನಾಳ್

ಧರ್ಮಸ್ಥಳ ಕೇಸ್: ಸದ್ಯಕ್ಕೆ ಎನ್ ಐಎ ತನಿಖೆ ಅವಶ್ಯಕತೆ ಇಲ್ಲ- ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು,ಸೆಪ್ಟಂಬರ್,4,2025 (www.justkannada.in):  ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ತನಿಖೆಗೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ನಡೆಯುತ್ತಿದೆ ಸದ್ಯಕ್ಕೆ ಎನ್ ಐಎ ತನಿಖೆ ಅವಶ್ಯಕತೆ ಇಲ್ಲ ಎಂದು ಯತ್ನಾಳ್ ಹೇಳಿದ್ದಾರೆ

ಪ್ರಕರಣ ಸಂಬಂಧ ಎಸ್ ಐಟಿ ತನಿಖೆ ಮಾಡುತ್ತಿದೆ ಧರ್ಮಸ್ಥಳದಲ್ಲಿ ಎಸ್ಐಟಿ ತನಿಖೆಯಲ್ಲಿ ಏನು ಸಿಕ್ಕಿಲ್ಲ.  ಎಲ್ಲಾ ಮುಗಿದ ಮೇಲೆ ಬಿವೈ ವಿಜಯೇಂದ್ರ ಹೋಗಿ ಎನ್ ಮಾಡುತ್ತಾರೆ ಸುಖಾಸುಮ್ಮನೆ ರಾಜಕೀಯ ಮಾಡೋದು ಬೇಡ ಎಂದು ಯತ್ನಾಳ್ ತಿಳಿಸಿದ್ದಾರೆ.

Key words: Dharmasthala case,  No need, NIA investigation, Basanagouda Patil Yatnal