• Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Search
Monday, June 16, 2025
Sign in
Welcome! Log into your account
Forgot your password? Get help
Create an account
Privacy Policy
Create an account
Welcome! Register for an account
A password will be e-mailed to you.
Privacy Policy
Password recovery
Recover your password
A password will be e-mailed to you.
Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ
vtu
  • Home
  • News
  • Politics
  • Crime
  • Cinema
  • Media Masala
  • Rasayana
  • Tenders
  • Mysuru
    • Essential Services in Mysuru
    • Mysore PIN Codes
  • Subscribe
  • Checkout
Home Front Page ಇತರ ನಿಗಮ-ಮಂಡಳಿಗಳ ಬ್ಯಾಂಕ್ ಖಾತೆಗಳ ವಿವರ ಬಹಿರಂಗಪಡಿಸಲಿ -ಆರ್.ರಘು ಕೌಟಿಲ್ಯ ಆಗ್ರಹ.
  • Front Page
  • News
  • Politics

ಇತರ ನಿಗಮ-ಮಂಡಳಿಗಳ ಬ್ಯಾಂಕ್ ಖಾತೆಗಳ ವಿವರ ಬಹಿರಂಗಪಡಿಸಲಿ -ಆರ್.ರಘು ಕೌಟಿಲ್ಯ ಆಗ್ರಹ.

By
prashanth
-
2024-06-01
Facebook
Twitter
Pinterest
WhatsApp

    ಮೈಸೂರು,ಜೂನ್,1,2024 (www.justkannada.in): ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹೆಸರಿನಲ್ಲಿದ್ದ ಖಾತೆಯಿಂದ 187 ಕೋಟಿ ಹಣ ದುರುಪಯೋಗವಾಗಿರುವ ಬಹುದೊಡ್ಡ ಹಗರಣದ ಹಿನ್ನೆಲೆಯಲ್ಲಿ ಸರ್ಕಾರದ ಇತರ ಅಭಿವೃದ್ಧಿ ನಿಗಮಗಳು ಹಾಗೂ ಮಂಡಳಿಗಳ ಆರ್ಥಿಕ ಸ್ಥಿತಿಗತಿಯ ಬಗ್ಗೆ ಹಾಗೂ ನಿಗಮ ಮಂಡಳಿಗಳು ಹೊಂದಿರುವ ಖಾತೆಗಳು ಹಾಗೂ ಅವುಗಳ ವಿವರವನ್ನು ಸಾರ್ವಜನಿಕರು ಪಾರದರ್ಶಕವಾಗಿ ತಿಳಿಯುವಂತಾಗಲು  ಈ ಕೂಡಲೇ  ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಬಿಜೆಪಿ ಮುಖಂಡ ಆರ್.ರಘು ಕೌಟಿಲ್ಯ ಒತ್ತಾಯಿಸಿದ್ದಾರೆ.

    ಈ ಕುರಿತು ಮಾಧ್ಯಮ ಪ್ರಕಟಣೆ ಪ್ರತಿಕ್ರಿಯಿಸಿರುವ ಆರ್. ರಘು ಕೌಟಿಲ್ಯ,  ಸರ್ಕಾರ ಮತಬ್ಯಾಂಕ್ ಆಧಾರಿತ ಯೋಜನೆಗಳನ್ನು ಜಾರಿಗೊಳಿಸಲು ತನ್ನ ಬೊಕ್ಕಸ ಬರಿದು ಮಾಡಿಕೊಂಡಿದ್ದು ಅಭಿವೃದ್ಧಿಕಾರ್ಯಗಳನ್ನು ಮೂಲೆಗೆ ಸರಿಸಿದೆ ,ಜತೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಚುನಾವಣೆ ಎದರಿಸಲು ಅಕ್ರಮ ಮಾರ್ಗದಲ್ಲಿ ಸರ್ಕಾರಿ ನಿಗಮಗಳ ಹಣ ದುರುಪಯೋಗ ಪಡಿಸಿಕೊಂಡಿರುವ ಪ್ರಕರಣವೂ ವಾಲ್ಮೀಕಿ ನಿಗಮದ ಮೂಲಕ ಬೆಳಕಿಗೆ ಬಂದಿದೆ.

    ಡಾ. ಅಂಬೇಡ್ಕರ್‌ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ‌                        ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಸೇರಿದಂತೆ ಇತರ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳು ಹಾಗೂ ಸರ್ಕಾರದ ಅನುದಾನ ಪಡೆಯುವ ಇತರ ಮಂಡಳಿಗಳು ಹಾಗೂ ಪ್ರಾಧಿಕಾರಗಳ ಖಾತೆಗಳಲ್ಲಿ ಇರುವ ಹಣದ ವಿವರ ಬಯಲಾಗಬೇಕಿದೆ. ಸದ್ಯ ವಾಲ್ಮೀಕಿ ನಿಗಮದ ಹಗರಣವೊಂದು ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ಬೆಳಕಿಗೆ ಬಂದಿದ್ದು, ಇದೇ ರೀತಿಯ ಹಣ ದುರುಪಯೋಗದ ಪ್ರಕರಣಗಳು ಹಾಗೂ ಅಕ್ರಮ ಹಣ ವರ್ಗಾವಣೆಗಳು ಇತರ ನಿಗಮಗಳಲ್ಲೂ ನಡೆದಿರುವ ಸಾಧ್ಯತೆಗಳನ್ನು  ತಳ್ಳಿ ಹಾಕುವಂತಿಲ್ಲ. ಈ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಈ ಕೂಡಲೇ ಎಲ್ಲಾ ನಿಗಮಗಳ ಹಾಗೂ ಅನುದಾನ ಪಡೆಯುವ ಮಂಡಳಿಗಳ ಅರ್ಥಿಕ ವಿವರಗಳ ಸ್ಥಿತಿ ಗತಿಗಳ ಬಗ್ಗೆ ಶ್ವೇತಪತ್ರ ಹೊರಡಿಸುವ ಮೂಲಕ ರಾಜ್ಯದ ಆರ್ಥಿಕ ಸ್ಥಿತಿಯ ನಿರ್ವಹಣೆಯ ಶಿಸ್ತಿನ ಕುರಿತು ಪಾರದರ್ಶಕ ಮಾಹಿತಿ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ರಘು ಕೌಟಿಲ್ಯ ತಿಳಿಸಿದ್ದಾರೆ.

    ನಾನು ಈ ಹಿಂದೆ ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ನನಗೆ ತಿಳಿದಂತೆ ಸರ್ಕಾರದ ಅನುದಾನ ನಿಗಮಗಳಿಗೆ ಬಿಡುಗಡೆಯಾದ ನಂತರ ಅನುದಾನವು ಸಂಪೂರ್ಣವಾಗಿ ಬಳಕೆಯಾಗದೇ ಉಳಿಯುವ ಹಣ ಹಾಗೂ ನಿಗಮದಿಂದ ಸಾಲದ ನೆರವು ಪಡೆದ ಫಲಾನುಭವಿಗಳಿಂದ ಮರುಪಾವತಿಯಾಗುವ ಹಣವನ್ನು ನಿಗಮದ ಖಾತೆಗಳಲ್ಲಿ ಠೇವಣಿ ಇರಿಸಲಾಗುತ್ತಿತ್ತು. ನನಗೆ ಅರಿವಿರುವಂತೆ  ಸಾವಿರಾರು ಕೋಟಿ ರುಪಾಯಿಗಳ ಠೇವಣಿ ಅನೇಕ ನಿಗಮಗಳ ಖಾತೆಗಳಲ್ಲಿದೆ.  ಈ ಠೇವಣಿಗಳ ಕುರಿತ ಮಾಹಿತಿಗಳು ಹಾಗೂ ಇವುಗಳ ಮೇಲೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆ ಜಾಣಕುರುಡು ಪ್ರದರ್ಶಿಸುತ್ತಿದ್ದುದು ನಾನು ಗಮನಿಸಿದ್ದೇನೆ. ಈ ಹಿನ್ನೆಲೆಯಲ್ಲಿಯೇ ಆರ್ಥಿಕ ಇಲಾಖೆಯ ಕಣ್ಣು ತಪ್ಪಿಸಿ, ವಾಲ್ಮೀಕಿ ನಿಗಮದ ಹಣ ದುರುಪಯೋಗವಾಗಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಅತೀ ತುರ್ತಾಗಿ ಸರ್ಕಾರ ನಿಗಮ ಮಂಡಳಿಗಳ ಬ್ಯಾಂಕ್‌ ಖಾತೆಗಳ ವಿವರ ಪ್ರಕಟಿಸಿದರೆ, ವಾಲ್ಮೀಕಿ ನಿಗಮದ ಹಗರಣದಂತೆ ಇನ್ನಷ್ಟು ಹಗರಣಗಳು ಹೊರಬರುವ ಸಾಧ್ಯತೆಯಿದೆ ಎಂದು ರಘು ಕೌಟಿಲ್ಯ ಹೇಳಿದ್ದಾರೆ.

    Key words: Bank account, details, corporate bodies, R. Raghu Kautilya

    • TAGS
    • Bank account-details-other-corporate bodies –
    • disclosed
    • R Raghu Kautilya
    Facebook
    Twitter
    Pinterest
    WhatsApp
      Previous articleಬಿಜೆಪಿ ಶಾಸಕ ಪೂಂಜಗೆ ಹೈಕೋರ್ಟ್‌ ತರಾಟೆ : ಭಯೋತ್ಪಾದಕನ ಬಂಧನ ವಿರೋಧಿಸಿ ಠಾಣೆಗೆ ಹೋಗಲು ಸಾಧ್ಯವೆ..?
      Next articleಅತ್ಯಾಚಾರ ಪ್ರಕರಣ :  ಆರೋಪ ನಿರಾಕರಿಸಿದರೆ ʼ ವಿಶೇಷ ಪರೀಕ್ಷೆ ʼ ಎದುರಿಸಬೇಕಾಗುತ್ತದೆ ಪ್ರಜ್ವಲ್‌.
      prashanth

      RELATED ARTICLESMORE FROM AUTHOR

      WTC ಫೈನಲ್‌ ನಲ್ಲಿ ಎಡವಿದ ಆಸಿಸ್:  ದ.ಆಫ್ರಿಕಾಗೆ ಚಾಂಪಿಯನ್ ಪಟ್ಟ

      ದಸರಾಗೆ 49.61ಕೋಟಿ ರೂಪಾಯಿ ಖರ್ಚು ಮಾಡುವ ಅವಶ್ಯಕತೆ ಇತ್ತಾ..? MLC ಹೆಚ್.ವಿಶ್ವನಾಥ್ ಕಿಡಿ

      ಶ್ರೇಷ್ಠ ಭಾರತ ನಿರ್ಮಾಣಕ್ಕೆ ಕೈಜೋಡಿಸಿ- ವಿದ್ಯಾರ್ಥಿಗಳಿಗೆ ರಾಜ್ಯಪಾಲ ಗೆಹ್ಲೋಟ್ ಕರೆ

      Sponsor Ads 1

      Sponsor Ads 2

      Sponsor Ads 3

      Sponsor Ads 4

      EDITOR PICKS

      BREAKING NOW: ಉದಯಗಿರಿ “ ಪ್ರಚೋಧನಕಾರಿ ಪೋಸ್ಟ್‌ “: ಜಾಮೀನು ಕೋರಿ ಕೋರ್ಟ್‌ ಮೊರೆ...

      2025-02-13

      5 ವರ್ಷದಲ್ಲಿ 20 ಲಕ್ಷ ಉದ್ಯೋಗ : ನೂತನ ಕೈಗಾರಿಕಾ ನೀತಿ ಬಿಡುಗಡೆ ಮಾಡಿದ...

      2025-02-11

      ಜಾಗತಿಕ ಹೂಡಿಕೆದಾರರ ಸಮಾವೇಶ : 12 ವಿಶೇಷ ಹೂಡಿಕೆ ವಲಯ ಸ್ಥಾಪನೆ: ಸಚಿವ ಎಂ...

      2025-02-11

      POPULAR POSTS

      ಪಬ್ಲಿಕ್ ಟಿವಿ ಸಂಪಾದಕ ರಂಗನಾಥ್ ಕಾಲೆಳೆದ ವಿಡಿಯೋ ವೈರಲ್ ಮಾಡಿದ್ದು ಸರಿನಾ..?

      2020-03-30

      ಈ ದಂಪತಿ ನೋಡಿ ಮೈಸೂರಿನ ದೇವರಾಜ ಮಾರುಕಟ್ಟೆ ವ್ಯಾಪಾರಿಗಳಿಗೆ ಭಾನುವಾರ ಬೆಳ್ಳಂಬೆಳಗ್ಗೆ ಶಾಕ್..!

      2019-06-16

      ಇಂತವರಿಂದ ಪಕ್ಷ ಕಟ್ಟಿ ಬೆಳೆಸಲು ಸಾಧ್ಯವಿಲ್ಲ: ಮೈಸೂರಿನಲ್ಲೆ ಪಕ್ಷದಿಂದ ಉಚ್ಚಾಟಿಸುತ್ತೇನೆ- ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ...

      2021-01-05

      POPULAR CATEGORY

      • Front Page42965
      • News42949
      • Politics25067
      • Crime3933
      • Cinema3523
      • Sports1334
      • Tenders426
      • Media Masala368
      Just Kannada
      ABOUT US
      Just Kannada is a global platform for all issues related to Kannada. At the very root, it’s a news-driven portal. Everything that’s happening in Karnataka, or whatever that’s happening anywhere in the world that has any consequence to Karnataka, is updated here every minute.
      Contact us: info@justkannada.in
      • Terms & Conditions
      • Privacy Policy
      • Refund Policy
      • Grievances
      • Statistics
      • Contact

      Copyright © 2017- . All Rights Reserved: Just Kannada - News 24x7 | Hosted by: DIGICUBE SOLUTIONS

      Subscribe to our News Service @ Just Rs. 399/- per Year and Get Daily Updates Directly to Your Mobile Phones     Subscribe Now | Checkout