ಮಾಜಿ ಸಿಎಂ ಬಿಎಸ್ ವೈರಿಂದ ಬೆಂಗಳೂರು ನಗರ ರೌಂಡ್ಸ್: ಕಾಮಗಾರಿಗಳ ವೀಕ್ಷಣೆ.

ಬೆಂಗಳೂರು,ನವೆಂಬರ್,9,2023(www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರಿ ಮಳಗೆ ಜನರು ತತ್ತರಿಸಿದ್ದು,  ಈ ಮಧ್ಯೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿ ಸ್ಥಗಿತಗೊಂಡ ಕಾಮಗಾರಿಗಳ ವೀಕ್ಷಣೆ ಮಾಡಿದರು.

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಹೊಸಕೆರೆಹಳ್ಳಿ ಭಾಗದಲ್ಲಿ ಸ್ಥಗಿತಗೊಂಡ ಕಾಮಗಾರಿಗಳ ವೀಕ್ಷಣೆ ಮಾಡಿದ್ದಾರೆ.  ಮಾಜಿ ಸಿಎಂ ಬಿಎಸ್ ​​ವೈಗೆ ಶಾಸಕರಾದ ಅಶ್ವತ್ಥ್ ನಾರಾಯಣ್, ಮುನಿರತ್ನ ಸಾಥ್​​ ನೀಡಿದರು. ಬಿಜೆಪಿ ಅವಧಿಯಲ್ಲಿನ ಅನುದಾನದಿಂದ ಆರಂಭಗೊಂಡಿದ್ದ ಕಾಮಗಾರಿಗಳನ್ನ ಬಿಎಸ್ ವೈ ವೀಕ್ಷಿಸಿದರು.

ಇನ್ನುಈ ತಿಂಗಳ ಅಂತ್ಯದಲ್ಲಿ ಮೂರು ದಿನ ಸತ್ಯಾಗ್ರಹ ಮಾಡುತ್ತೇನೆ. ವಿಧಾನಸೌಧ ಅಥವಾ ಫ್ರೀಡಂಪಾರ್ಕ್ ​ನಲ್ಲಿ ಸತ್ಯಾಗ್ರಹ ಮಾಡ್ತೇನೆ. ನಾಳೆ ಸತ್ಯಾಗ್ರಹದ ದಿನಾಂಕ ನಿಗದಿ ಮಾಡುತ್ತೇನೆ ಎಂದು ಬಮಾಜಿ ಸಿಎಂ ಬಿ.ಎಸ್​ಯಡಿಯೂರಪ್ಪ  ತಿಳಿಸಿದ್ದಾರೆ.

Key words: Bangalore Rounds -Former CM -BS Yeddyurappa