ಬಡಿಗೆ ಬಡಿದಾಟದ ಜಾತ್ರೆಯಲ್ಲಿ ದುರಂತ : ಇಬ್ಬರು ಸಾವು, 15 ಕ್ಕೂ ಹೆಚ್ಚು ಜನರು ಗಂಭೀರ.

ದೇವರಗುಡ್ಡ,ಅಕ್ಟೋಬರ್,3,2025 (www.justkannada.in): ಬಡಿಗೆ ಬಡಿದಾಟದ ಜಾತ್ರೆ ವೇಳೆ ಇಬ್ಬರು ಸಾವನ್ನಪ್ಪಿ 15ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿರುವ ಘಟನೆ ಕರ್ನಾಟಕ-ಆಂಧ್ರ ಗಡಿಭಾಗದ ದೇವರಗುಡ್ಡದಲ್ಲಿ ನಡೆದಿದೆ.

ದೇವರಗುಡ್ಡದ ಮಾಳಮಲ್ಲೇಶ್ವರ ಸನ್ನಿಧಿಯಲ್ಲಿ ನಡೆದ ವಿಶಿಷ್ಟ ಜಾತ್ರೆಯಲ್ಲಿ ಬಡಿಗೆ ಹಿಡಿದು ಬಡಿದಾಡುತ್ತಾ ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ಉತ್ಸವ ಮೂರ್ತಿ ತಮ್ಮ ಊರುಗಳಿಗೆ ಒಯ್ಯಲು ನಡೆದ ಬಡಿದಾಟ ನಡೆದಿದೆ.

ಕರ್ನಾಟಕ-ಆಂಧ್ರಪ್ರದೇಶದ ಗಡಿ ಭಾಗದ ಹಳ್ಳಿಗಳಾದ ಅರಕೇರ-ನೇರಣಗಿ ಗ್ರಾಮಸ್ಥರ ನಡುವೆ ನಡೆಯುವ ಬಡಿಗೆ ಬಡಿದಾಟದ ಜಾತ್ರೆಯಲ್ಲಿ ಈ ಘಟನೆ ನಡೆದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. 15ಕ್ಕೂ ಹೆಚ್ಚು ಜನರು ಗಂಭೀರ ಗಾಯಗೊಂಡಿದ್ದು ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Key words: Badige Batidata fair, Two dead, serious condition