ಡಿಕೆಶಿ ಬಂಡೆ ಅಲ್ಲ, ರೈಲ್ವೆ ಇಂಜಿನ್: ಎಲ್ಲರನ್ನೂ ಎಳೆದುಕೊಂಡು ಹೋಗ್ತಿದ್ದಾರೆ- ಬಿ.ಕೆ ಹರಿಪ್ರಸಾದ್

ಬೆಂಗಳೂರು,ಫೆಬ್ರವರಿ,16,2026 (www.justkannada.in):  ಡಿಸಿಎಂ ಡಿಕೆ ಶಿವಕುಮಾರ್ ಬಂಡೆ ಅಲ್ಲ, ರೈಲ್ವೆ ಇಂಜಿನ್ ರೀತಿ. ಎಲ್ಲರನ್ನೂ ಎಳೆದುಕೊಂಡು ಹೋಗುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದರು.

ನಾಯಕತ್ವ ಕಚ್ಚಾಟ ವಿಚಾರ ಕುರಿತು ಮಾತನಾಡಿದ ಬಿ.ಕೆ ಹರಿಪ್ರಸಾದ್,  ನಾಯಕತ್ವದ ಬಗ್ಗೆ ಗೊಂದಲ ಸೃಷ್ಠಿ ಮಾಡಿದ್ದು ಯಾರು?  ಒಂದು ಕಡೆ ಸಿಎಂ ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷರು. ಇಬ್ಬರು ಗೊಂದಲ ಸೃಷ್ಠಿ ಮಾಡದೆ ಮುಂದುವರೆಸಬೇಕಾಗುತ್ತದೆ ಗೊಂದಲ ಸೃಷ್ಠಿ ಮಾಡಿದ್ದು ಹೈಕಮಾಂಡ್ ಅಲ್ಲ ಹಾಗಾಗಿ ಹೈಕಮಾಂಡ್ ಯಾಕೆ ಗೊಂದಲ ಬಗೆಹರಿಸುತ್ತದೆ. ಡಿಕೆ ಶಿವಕುಮಾರ್ ಬಂಡೆ ಅಲ್ಲ ರೈಲ್ವೆ ಇಂಜಿನ್ ಬರುವಾಗ ಸೌಂಡ್ ಆಗುತ್ತೆ.  ರೈಲುಬರುವಾಗ ಚಹ ತಿಂಡಿ ಮಾರುವವರು ಸೌಂಡ್ ಮಾಡುತ್ತಾರೆ. ಅದೇ ರೀತಿ ಡಿಕೆ ಶಿವಕುಮಾರ್  ಎಲ್ಲರನ್ನು ಎಳೆದುಕೊಂಡು ಹೋಗುತ್ತಾರೆ. ಅವರು ಬಂದಾಗ ಆರ್ಭಟ ಇರುತ್ತೆ ಹೋದಾಗಲೂ ಆರ್ಭಟ ಇರುತ್ತೆ. ಏನೇ ಇದ್ದರು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ತೀರ್ಮಾನಿಸುತ್ತಾರೆ ಎಂದರು.

ಆರ್ ಎಸ್ಎಸ್ ದೆವ್ವವಿದ್ದಂತೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ  ಸಮರ್ಥಿಸಿಕೊಂಡ ಬಿ.ಕೆ ಹರಿಪ್ರಸಾದ್,  ಆರ್ ಎಸ್ಎಸ್ ತನ್ನ ಖಾತೆ ವಿವರಗಳನ್ನ ಕೊಡಲಿ. ನೂರಾರು ಕೋಟಿ ವ್ಯವಹಾರ ವಾದ್ರೆ ಕೇಸ್ ದಾಖಲಿಸಬೇಕು. ಪ್ರಿಯಾಂಕ್ ಖರ್ಗೆ ಮಾತಿಗೆ ಬೆಂಬಲವಿದೆ. ಆರ್ ಎಸ್ ಅದೃಶ್ಯ  ಸಂಘಟನೆ ಎಂದು ಟೀಕಿಸಿದರು.

Key words: DK Shivakumar, rock, railway engine, B.K Hariprasad