ಅಂತರಸಂತೆ ಗ್ರಾಮ ಪಂಚಾಯಿತಿಯಲ್ಲಿ ಆರೋಗ್ಯ ಹಸ್ತ ಕಾರ್ಯಕ್ರಮ

ಮೈಸೂರು, ಸೆಪ್ಟೆಂಬರ್ 20, 2020 (www.justkannada.in:) ಹೆಚ್ ಡಿ ಕೋಟೆ ವಿಧಾನಸಭಾ ಕ್ಷೇತ್ರ ಸರಗೂರು ತಾಲ್ಲೂಕು ಅಂತರಸಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್’ನಿಂದ ಮನೆ ಮನೆ ತೆರಳಿ ಕೋವಿಡ್-19 ಕೋರೊನ ಪರೀಕ್ಷೆ ಮಾಡುವಂತ ಕಾರ್ಯಕ್ರಮ ಆಯೋಜಿಸಲಾಗಿರುವ ಆರೋಗ್ಯ ಹಸ್ತ ಕಾರ್ಯಕ್ರಮಕ್ಕೆ ಅಂತರಸಂತೆ ಗ್ರಾಮದ ಹಾಲಿನ ಡೈರಿ ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.

ಮೊದಲಿಗೆ ಎಲ್ಲಾರಿಗೂ ಮಾಸ್ಕ್ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಮಾಡಲಾಯಿತು ನಂತರ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಸರಗೂರು ತಾಲ್ಲೂಕು ಬ್ಲ್ಯಾಕ್ ಉಸ್ತುವಾರಿಗಳಾದ ಶ್ರೀ ವರುಣಮಹೇಶ್ ರವರು ಚಾಲನೆ ನೀಡಿದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ವೀಕ್ಷಕರಾದ ಕೆಪಿ ಯೋಗೇಶ್.ಸರಗೂರು ಬ್ಲಾಕ್ ಅಧ್ಯಕ್ಷರಾದ ಮನುಗನಹಳ್ಳಿ ಮಾದಪ್ಪ, ಕಾರ್ಯದರ್ಶಿ ಚಲುವರಾಜ್ ಮತ್ತು ನೀಲಶಂಕರ್ ಎನ್ ಬಾಲಯ್ಯ ಉದಯಕುಮಾರ್ ಸುಬ್ರಹ್ಮಣ್ಯ ಚೆಲುವರಾಜ್ ಹಾಗೂ ಸುಬ್ರಹ್ಮಣ್ಯ ಮತ್ತು ಕೊರನಾ ವಾರಿಯರ್ಸ್ ಸುಧಾ ಮುಸ್ವೀರ ಪರವಿನ ಇತರರು ಇದ್ದರು.