Friday, August 7, 2026

BDA Apartments

Home Front Page ಅತಿಥಿ ಶಿಕ್ಷಕರ ನೇಮಕಾತಿ:  ಅರ್ಜಿ ಆಹ್ವಾನ

ಅತಿಥಿ ಶಿಕ್ಷಕರ ನೇಮಕಾತಿ:  ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜುಲೈ 18,2024 (www.justkannada.in): 2024-25ನೇ ಸಾಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳು ಮತ್ತು ಮೌಲಾನಾ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರ ಹುದ್ದೆಗೆ  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಗೌರವಧನದ ಆಧಾರದ ಮೇಲೆ ಪಡೆಯಲು ಉದ್ದೇಶಿಸಿರುವುದರಿಂದ ಅರ್ಹ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ತಮ್ಮ ಸ್ವವಿವರಗಳಿರುವ (Biodata, Resume) ಮನವಿಗಳನ್ನು ಅವಶ್ಯ ದಾಖಲೆಗಳೊಂದಿಗೆ ಜಿಲ್ಲಾ  ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು ಇಲ್ಲಿಗೆ ಸಲ್ಲಿಸಬೇಕು.

ಹುದ್ದೆಗಳ ವಿವರ ಈ ಕೆಳಕಂಡಂತಿದೆ.

  1. ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಗಿಡ್ಡಪ್ಪನಹಳ್ಳಿ, ಹೊಸಕೋಟೆ ತಾ|| (6 ರಿಂದ 10ನೇ ತರಗತಿ ಸಿ.ಬಿ.ಎಸ್.ಇ) ವಿಷಯ-ಗಣಿತ ಶಿಕ್ಷಕರು, ವಿದ್ಯಾರ್ಹತೆ-ಬಿ.ಎಸ್.ಸಿ/ಬಿ.ಇಡಿ ಹುದ್ದೆ-01, (11ನೇ ತರಗತಿ – ರಾಜ್ಯ ಪಠ್ಯಕ್ರಮ) (ಪಿ.ಸಿ.ಎಂ.ಬಿ) ವಿಷಯ-ರಸಾಯನಿಕ ಶಾಸ್ತ್ರ ಉಪನ್ಯಾಸಕರು ವಿದ್ಯಾರ್ಹತೆ-ಎಂ.ಎಸ್.ಸಿ/ಬಿ.ಇಡಿ ಹುದ್ದೆ-01, ಜೀವಶಾಸ್ತ್ರ ಉಪನ್ಯಾಸಕರು ವಿದ್ಯಾರ್ಹತೆ-ಎಂ.ಎಸ್.ಸಿ/ಬಿ.ಇಡಿ ಹುದ್ದೆ-01
  2. ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವನಾಯಕನಹಳ್ಳಿ, ದೇವನಹಳ್ಳಿ ತಾ. (11 ನೇ ತರಗತಿ – ರಾಜ್ಯ ಪಠ್ಯಕ್ರಮ) (ಪಿ.ಸಿ.ಎಂ.ಬಿ) ವಿಷಯ- ಕನ್ನಡ ಭಾಷಾ ಉಪನ್ಯಾಸಕರು ವಿದ್ಯಾರ್ಹತೆ-ಎಂ.ಎ/ಬಿ.ಇಡಿ ಹುದ್ದೆ-01, ಇಂಗ್ಲೀಷ್ ಭಾಷಾ ಉಪನ್ಯಾಸಕರು ವಿದ್ಯಾರ್ಹತೆ-ಎಂ.ಎ/ಬಿ.ಇಡಿ ಹುದ್ದೆ-01, ರಸಾಯನಿಕ ಶಾಸ್ತ್ರ ಉಪನ್ಯಾಸಕರು ವಿದ್ಯಾರ್ಹತೆ-ಎಂ.ಎಸ್.ಸಿ/ಬಿ.ಇಡಿ ಹುದ್ದೆ-01
  3. ಮೌಲಾನಾ ಆಜಾದ್ ಮಾದರಿ ಶಾಲೆ, ಮುತ್ತೂರು, ದೊಡ್ಡಬಳ್ಳಾಪುರ ತಾ. ಆಂಗ್ಲ ಭಾಷಾ ಶಿಕ್ಷಕರು ಬಿ.ಎ/ಬಿ.ಇಡಿ 01
  4. ಮೌಲಾನಾ ಆಜಾದ್ ಮಾದರಿ ಶಾಲೆ, ಇಸ್ಲಾಂಪುರ, ನೆಲಮಂಗಲ ತಾ. ಕನ್ನಡ ಶಿಕ್ಷಕರು ವಿದ್ಯಾರ್ಹತೆ- ಬಿ.ಎ/ಬಿ.ಇಡಿ ಹುದ್ದೆ-01, ಹಿಂದಿ ಶಿಕ್ಷಕರು ವಿದ್ಯಾರ್ಹತೆ-ಬಿ.ಎ/ಬಿ.ಇಡಿ ಹುದ್ದೆ-01, ಗಣಿತ ಶಿಕ್ಷಕರು ವಿದ್ಯಾರ್ಹತೆ-ಬಿ.ಎಸ್.ಸಿ/ಬಿ.ಇಡಿ ಹುದ್ದೆ-01, ಸಾಮಾನ್ಯ ವಿಜ್ಞಾನ ಶಿಕ್ಷಕರು ವಿದ್ಯಾರ್ಹತೆ-ಬಿ.ಎಸ್.ಸಿ/ಬಿ.ಇಡಿ ಹುದ್ದೆ-01, ಸಮಾಜ ವಿಜ್ಞಾನ ಶಿಕ್ಷಕರು ವಿದ್ಯಾರ್ಹತೆ-ಬಿ.ಎ/ಬಿ.ಇಡಿ ಹುದ್ದೆ-01

5.ಮೌಲಾನಾ ಆಜಾದ್ ಮಾದರಿ ಶಾಲೆ, ವಿಜಯಪುರ ದೇವನಹಳ್ಳಿ ತಾ.    ಸಾಮಾನ್ಯ ವಿಜ್ಞಾನ ಶಿಕ್ಷಕರು, ವಿದ್ಯಾರ್ಹತೆ-ಬಿ.ಎಸ್.ಸಿ/ಬಿ.ಇಡಿ  ಹುದ್ದೆ-01

ಅರ್ಜಿ ಸಲ್ಲಿಸಲು ಜುಲೈ 25 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ: 216, 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋ , ದೇವನಹಳ್ಳಿ ತಾ. -562110, ಬೆಂಗಳೂರು ಗ್ರಾಮಾಂತರ ಜಿಲ್ಲೆ. ದೂ.ಸಂ-080-29787455,

ಪ್ರಾಂಶುಪಾಲರು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಶಾಲೆ, ಗಿಡ್ಡಪ್ಪನಹಳ್ಳಿ, ಹೊಸಕೋಟೆ ತಾ.  ದೂ.ಸಂ-8660971267, ಪ್ರಾಂಶುಪಾಲರು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ದೇವನಾಯಕನಹಳ್ಳಿ, ದೇವನಹಳ್ಳಿ ತಾ. ದೂ.ಸಂ-7338227541,

ಮುಖ್ಯೋಪಾಧ್ಯಾಯರು ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ, ಇಸ್ಲಾಂಪುರ ಗ್ರಾಮ, ನೆಲಮಂಗಲ ತಾಲ್ಲೂಕು ದೂ.ಸಂ-9731017483, ಮುಖ್ಯೋಪಾಧ್ಯಾಯರು, ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ, ಮುತ್ತೂರು, ದೊಡ್ಡಬಳ್ಳಾಪುರ ತಾಲ್ಲೂಕು ದೂ.ಸಂ-9743239145, ಮುಖ್ಯೋಪಾಧ್ಯಾಯರು, ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ, ವಿಜಯಪುರ, ದೇವನಹಳ್ಳಿ ತಾಲ್ಲೂಕು ದೂ.ಸಂ 9066296080 ಈ ಸಂಖ್ಯೆಗೆ ಸಂಪರ್ಕಿಸಬಹುದೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Application, Invitation, Guest Teacher, Recruitment