ಬೆಂಗಳೂರು,ಸೆಪ್ಟಂಬರ್,1,2025 (www.justkannada.in): ನಟ ದರ್ಶನ್ ಜೈಲು ಸೇರಿರುವ ವಿಚಾರ, ತಾವು ಮತ್ತು ದರ್ಶನ್ ಒಂದಾಗುವ ಬಗ್ಗೆ ಹಾಗೂ ತಾನು ರಾಜಕೀಯ ಪ್ರವೇಶಿಸುವ ಕುರಿತು ನಟ ಕಿಚ್ಚ ಸುದೀಪ್ ಮಾತನಾಡಿದ್ದಾರೆ.
ನಾಳೆ ಹುಟ್ಟುಹಬ್ಬ ಇರುವ ಹಿನ್ನೆಲೆ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ನಟ ಸುದೀಪ್, ದರ್ಶನ್ ಮತ್ತು ತಾವು ಒಂದಾಗುವ ಕುರಿತು ಪ್ರತಿಕ್ರಿಯಿಸಿ, ಸೂರ್ಯನೊಬ್ಬ, ಚಂದ್ರನೊಬ್ಬ.ಅವರು ಎಲ್ಲಿಲ್ಲಿ ಇರಬೇಕೋ ಅಲ್ಲಿ ಇದ್ದರೆ ಚೆಂದ. ನಾವ್ಯಾಕೆ ದೂರ ಆಗಿದ್ದೆವು ಎಂಬುದು ನಮ್ಮಿಬ್ಬರಿಗೆ ಮಾತ್ರ ಗೊತ್ತು. ಅಷ್ಟೇ ಸಾಕು. ಬೇರೆಯವರು ಏನೇ ಮಾತನಾಡಿಕೊಂಡರು ತಲೆ ಕೆಡಿಸಿಕೊಳ್ಳಲ್ಲ ಎಂದರು.
ನಟ ದರ್ಶನ್ ಜೈಲು ಸೇರಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ನಟ ಕಿಚ್ಚ ಸುದೀಪ್, ಖಂಡಿತವಾಗಿ ದರ್ಶನ್ ಸಿನಿಮಾಗೆ ಒಳ್ಳೆಯದಾಗಲಿ. ಅವರ ನೋವು ಅವರಿಗೆ ಇರುತ್ತೆ. ಆ ಬಗ್ಗೆ ಮಾತಾಡಿದ್ರೆ ತಪ್ಪಾಗುತ್ತೆ ಅವರದ್ದು ಏನೇ ಇದ್ರೂ ಕಾನೂನು ಇದೆ ಸರ್ಕಾರ ನೋಡಿಕೊಳ್ಳುತ್ತೆ ಎಂದರು.
ನಾನು ರಾಜಕೀಯಕ್ಕೆ ಬರುವ ಬಗ್ಗೆ ಗೊತ್ತಿಲ್ಲ. ಆದರೆ ರಾಜಕೀಯಕ್ಕೆ ಬಂದರೂ ನಾನು ಬದಲಾಗಲ್ಲ. ಬದಲಾಗದ ಹಾಗೆ ನನ್ನ ಬೋಲ್ಟು ನಟ್ಟು ನಾನೇ ಸರಿ ಮಾಡಿಕೊಳ್ಳುತ್ತೇನೆ ಅಷ್ಟೆ ಎಂದು ಕಿಚ್ಚ ಸುದೀಪ್ ಹೇಳಿದರು.
Key words: Actor Sudeep, Darshan, political