ತಪ್ಪಾಗಿದ್ದರೆ ಕ್ಷಮೆ, ಇಲ್ಲದಿದ್ದರೇ ಕ್ಷಮೆ ಕೇಳಲ್ಲ- ನಟ ಕಮಲ್ ಹಾಸನ್

ಚೆನ್ನೈ,ಮೇ,30,2025 (www.justkannada.in):  ತಮಿಳಿನಿಂದ ಕನ್ನಡ ಹುಟ್ಟಿತು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ  ಹಿರಿಯ ನಟ ಕಮಲ್ ಹಾಸನ್ ಅವರ ಕ್ಷಮೆಯಾಚನೆಗೆ ಕರ್ನಾಟಕದಾದ್ಯಂತ ಆಗ್ರಹ ಕೇಳಿ ಬಂದಿದೆ. ನಟನ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಕೂಡಲೇ ಕನ್ನಡಿಗರ ಕ್ಷಮೆಯಾಚಿಸಿ, ಇಲ್ಲದಿದ್ದರೆ ನಿಮ್ಮ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲಾಗುವುದು ಎಂದು ಹೋರಾಟಗಾರರು ನಟನಿಗೆ ಎಚ್ಚರಿಕೆ ನೀಡಿದ್ದಾರೆ.

ಆದರೆ ಈ ಕುರಿತು ಪ್ರತಿಕ್ರಿಯಿಸಿರುವ ನಟ ಕಮಲ್ ಹಾಸನ್, ನಾನು ತಪ್ಪು ಮಾಡಿದ್ದರೇ ಮಾತ್ರ ಕ್ಷಮೆ ಕೇಳುತ್ತೇನೆ ಇಲ್ಲಿದ್ದಿದ್ದರೇ ಕ್ಷಮೆ ಕೇಳಲ್ಲ ಎಂದಿದ್ದಾರೆ.

ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಇಂದು ಭೇಟಿಯಾಗಿ ಬಳಿಕ ಭಾಷಾ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಟ ಕಮಲ್ ಹಾಸನ್ , ನನಗೆ ಈ ಹಿಂದೆಯೂ ಬೆದರಿಕೆ ಹಾಕಲಾಗಿತ್ತು. ನಾನು ತಪ್ಪು ಮಾಡಿದ್ದರೆ ಕ್ಷಮೆ ಯಾಚಿಸುತ್ತೇನೆ, ತಪ್ಪಿಲ್ಲವೆಂದಲ್ಲಿ ಕ್ಷಮೆ ಯಾಚಿಸುವುದಿಲ್ಲ. ನಾನಿರುವುದು ಹೀಗೆ. ಇದನ್ನು ಹಾಳು ಮಾಡಲು ಪ್ರಯತ್ನಿಸಬೇಡಿ. ಅದು ವರ್ಕ್​ ಆಗೋದಿಲ್ಲ ಎಂದಿದ್ದಾರೆ.vtu

ಎಲ್ಲಾ ಭಾಷೆಗಳ ಮೇಲೂ ನನಗಿರುವ ನಿಜವಾದ ಪ್ರೀತಿ ಎಲ್ಲರಿಗೂ ತಿಳಿದಿದೆ. “ಅಜೆಂಡಾ” ಇರುವವರನ್ನು ಹೊರತುಪಡಿಸಿ ಯಾರಿಗೂ ಅದರಿಂದ ಸಮಸ್ಯೆ ಇಲ್ಲ. ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯವನ್ನು ನಂಬುತ್ತೇನೆ ಎಂದು ಹೇಳಿದ್ದಾರೆ.

Key words: Kannada, Tamil, Statement, Actor, Kamal Haasan