Thursday, August 13, 2026

BDA Apartments

Home Front Page ಯಾರು ಆತಂಕ ಪಡುವ ಅಗತ್ಯವಿಲ್ಲ: ನಿಮ್ಮ ಜತೆ ನಾವಿದ್ದೇವೆ- ನೆರೆ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ...

ಯಾರು ಆತಂಕ ಪಡುವ ಅಗತ್ಯವಿಲ್ಲ: ನಿಮ್ಮ ಜತೆ ನಾವಿದ್ದೇವೆ- ನೆರೆ ಸಂತ್ರಸ್ತರಿಗೆ ಧೈರ್ಯ ತುಂಬಿದ ಸಿಎಂ ಬಿಎಸ್ ಯಡಿಯೂರಪ್ಪ…

ಶಿವಮೊಗ್ಗ,ಆ,13,2019(www.justkannada.in):  ಇಂದು  ತವರು ಜಿಲ್ಲೆ ಶಿವಮೊಗ್ಗದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ನೆರೆ ಸಂತ್ರಸ್ತರಿಗೆ ಧೈರ್ಯ ತುಂಬುತ್ತಿದ್ದಾರೆ.

ಶಿವಮೊಗ್ಗದ ರಾಜೀವ್ ಗಾಂಧಿ ಬಡಾವಣೆಗೆ ಭೇಟಿ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ ಅಲ್ಲಿ ಪರಿಶೀಲಿಸಿದರು. ಈ ವೇಳೆ ಮಹಿಳೆಯರು ಸಿಎಂ ಕಾಲಿಗೆ ಬಿದ್ದು ನಾವು ರಸ್ತೆಗೆ ಬಿದ್ದೀದ್ದೇವೆ ನಮ್ಮನ್ನ ಕಾಪಾಡಿ ಎಂದು ಅಳಲು ತೋಡಿಕೊಂಡರು. ಈ ಸಮಯದಲ್ಲಿ ನಿಮ್ಮ ಜತೆ ನಾವಿದ್ದೇವೆ ಯಾರು ಆತಂಕಪಡುವ ಅಗತ್ಯವಿಲ್ಲ ಎಂದು ಸಿಎಂ ಬಿಎಸ್ ವೈ ಧೈರ್ಯ ತುಂಬಿದರು.

ಇನ್ನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಹೆಗಲತ್ತಿ ಗ್ರಾಮಕ್ಕೆ ಭೇಟಿ ನೀಡಿದ ಸಿಎಂ ಬಿಎಸ್ ಯಡಿಯೂರಪ್ಪ ಅಲ್ಲಿನ ಪರಿಸ್ಥಿತಿ ಅವಲೋಕಿಸಿದರು.  ಈ ಸಮಯದಲ್ಲಿ ಮಾತನಾಡಿದ ಸಿಎಂ ಬಿಎಸ್ ವೈ, ರೈತರು ಕಂಗಾಲಾಗುವ ಅಗತ್ಯವಿಲ್ಲ.  ಗ್ರಾಮದಲ್ಲಿ ಗುಡ್ಡ ಕುಸಿದು  ಕೃಷಿ ಭೂಮಿ ನಾಶವಾಗಿದೆ. ಈಗ ಎಷ್ಟು ಭೂಮಿ ಮತ್ತು ಬೆಳೆ ನಾಶವಾಗಿದೆ ಎಂದು ಹೇಳಲು ಆಗಲ್ಲ. ಜಿಲ್ಲಾಧಿಕಾರಿಗಳು  ಅರಣ್ಯಾಧಿಕಾರಿಗಳು ಸರ್ವೆ ಮಾಡುತ್ತಾರೆ. ಸರ್ವೆ ಮಾಡಿ ವರದಿ ಬಂದ ನಂತರ ಅಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದರು.

Key words: No worry- CM BS Yeddyurappa-courageous to -eighboring victims- Shimoga