Thursday, August 6, 2026

BDA Apartments

Home Front Page ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಚಳಿ ಬಿಡಿಸಿದ ಶಾಸಕ ಜಿಟಿ ದೇವೇಗೌಡ.

ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಚಳಿ ಬಿಡಿಸಿದ ಶಾಸಕ ಜಿಟಿ ದೇವೇಗೌಡ.

ಮೈಸೂರು,ಜುಲೈ,4,2022(www.justkannada.in): ಮದ್ಯ  ಸೇವನೆಯಿಂದ ಜನ ಸಾವನ್ನಪ್ಪುತ್ತಿರುವ ವಿಚಾರಕ್ಕೆ ಕೆಡಿಪಿ ಸಭೆಯಲ್ಲಿ ಗರಂ ಆದ ಶಾಸಕ ಜಿ.ಟಿ ದೇವೇಗೌಡ, ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.

ಮೈಸೂರು ತಾಲ್ಲೂಕು ಪಂಚಾಯಿತಿ ವತಿಯಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ. ಟಿ ದೇವೇಗೌಡ ಅಧ್ಯಕ್ಷತೆಯಲ್ಲಿ ಕರ್ನಾಟಕ ಅಭಿವೃದ್ಧಿ ಯೋಜನೆಯ 20 ಅಂಶಗಳ ಕಾರ್ಯಕ್ರಮಗಳ ಕುರಿತು ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಮೈಸೂರು ಜಿಲ್ಲಾ ಪಂಚಾಯ್ತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸಭೆ ಆಯೋಜನೆ ಮಾಡಲಾಗಿತ್ತು.  ವಿವಿಧ ಇಲಾಖೆಗಳ ಹಿರಿಯ ಸರ್ಕಾರಿ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕ ಜಿ ಟಿ ದೇವೇಗೌಡ ಮಾಹಿತಿ ಕಲೆ ಹಾಕಿದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಂಜೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಕೆಡಿಪಿ ಸಭೆಯಲ್ಲಿ ಕ್ಷೇತ್ರದ ಸಿಂಧೂವಳ್ಳಿ ಸೇರಿದಂತೆ ಇತರೆಡೆ ಅಕ್ರಮ ಮದ್ಯ ಸೇವಿಸಿ ಜನರು  ಸಾವುಗೀಡಾಗಿರುವ ಬಗ್ಗೆ ಅಬಕಾರಿ ಇಲಾಖೆಯ ಅಧಿಕಾರಿಗಳ ಬಳಿ ಶಾಸಕ ಜಿ.ಟಿ ದೇವೇಗೌಡ ಮಾಹಿತಿ ಕೇಳಿದರು. ಆದರೆ ಈ ವೇಳೆ ಸಮರ್ಪಕ ಉತ್ತರ ನೀಡದ ಅಧಿಕಾರಿಗಳ ವಿರುದ್ಧ ಗರಂ ಆದ ಶಾಸಕ.ಜಿ.ಟಿ ದೇವೇಗೌಡ, ಜನ ಕುಡಿದು ಸಾಯುತ್ತಿದ್ದರೂ ನೀವೇನು ಮಾಡುತ್ತಿದ್ದೀರಿ.? ಅಕ್ರಮ ಮದ್ಯ ಮಾರಾಟ ಏಕೆ ತಡೆಯುತ್ತಿಲ್ಲ..? ಕ್ರಮಕೈಗೊಳ್ಳಲು ಯಾಕೆ ಹಿಂದೆ ಮುಂದು ನೋಡುತ್ತಿದ್ದೀರಿ..? ಮಧ್ಯ ಖರೀದಿಸಿ ಅಂಗಡಿಗಳಲ್ಲಿ ಮೂಟೆಗಟ್ಟಲೆ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ನೀವು ಇದುವರೆವಿಗೂ ಯಾರನ್ನ ಸಸ್ಪೆಂಡ್ ಮಾಡಿದ್ದೀರಿ..? ಯಾರ ಮೇಲೆ‌ ಕೇಸ್ ಆಗಿದೆ..? ಎಂದು ಕ್ಲಾಸ್ ತೆಗೆದುಕೊಂಡರು.coming-mysore-carrying-oxygen-mla-gt-deve-gowda

ಹೀಗೆ ಮುಂದುವರಿದರೆ ಅಬಕಾರಿ ಸಚಿವ ಗೋಪಾಲಯ್ಯ ನನಗೆ ಗೊತ್ತು ಅವರ ಜೊತೆ ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಬೇಕಾಗುತ್ತದೆ. ಜನರಿಗೆ ಎಷ್ಟು ಪ್ರಮಾಣದಲ್ಲಿ  ಮದ್ಯ ನೀಡುತ್ತಿದ್ದೀರಿ.? ಎಂದು ಸಭೆಯಲ್ಲಿ ಅಬಕಾರಿ ಅಧಿಕಾರಿಗಳನ್ನ ವಿವರ ಕೇಳಿ ಚಳಿ ಬಿಡಿಸಿದರು.

key words: MLA-GT Deve Gowda –class- Excise Department-officer