Monday, September 7, 2026

BDA Apartments

Home Front Page ಪಠ್ಯದಲ್ಲಿನ ತಮ್ಮ ಕಥೆಯನ್ನ ಕೈಬಿಡುವಂತೆ ಶಿಕ್ಷಣಸಚಿವರಿಗೆ ಖ್ಯಾತ ಲೇಖಕ ಬೊಳುವಾರು ಮಹಮದ್ ಕುಂಞಿ ಪತ್ರ.

ಪಠ್ಯದಲ್ಲಿನ ತಮ್ಮ ಕಥೆಯನ್ನ ಕೈಬಿಡುವಂತೆ ಶಿಕ್ಷಣಸಚಿವರಿಗೆ ಖ್ಯಾತ ಲೇಖಕ ಬೊಳುವಾರು ಮಹಮದ್ ಕುಂಞಿ ಪತ್ರ.

ಬೆಂಗಳೂರು,ಮೇ,31,2022(www.justkannada.in):  ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಬೆನ್ನಲ್ಲೆ ಹಲವು ಸಾಹಿತಿಗಳು ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದು ತಮ್ಮ  ಕಥೆ, ಕಾವ್ಯಗಳನ್ನ ಕೈ ಬಿಡುವಂತೆ ಮನವಿ ಮಾಡುತ್ತಿದ್ದಾರೆ ಅಂತೆಯೇ ಇದೀಗ ಖ್ಯಾತ ಲೇಖಕ ಬೊಳುವಾರು ಮಹಮದ್ ಕುಂಞಿ ಸಹ ಶಿಕ್ಷಣ ಸಚಿವರಿಗೆ  ಬರೆದು ಪಠ್ಯದಲ್ಲಿನ ತಮ್ಮ ಕಥೆಯನ್ನ ಕೈಬಿಡುವಂತೆ ಮನವಿ ಮಾಡಿದ್ದಾರೆ.

ಬೊಳುವಾರು ಮಹಮದ್ ಕುಂಞಿ ಅವರ ಪತ್ರದ ಸಾರಾಂಶ ಹೀಗಿದೆ.

ಪ್ರಸಕ್ತ ಸಿರಿ ಕನ್ನಡ–ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ (ಪರಿಷ್ಕೃತ) ೫ನೆಯ ತರಗತಿ ಪುಸ್ತಕದ ೨೪ನೆಯ ಪುಟದಲ್ಲಿರುವ, ‘ಸುಳ್ಳು ಹೇಳಬಾರದು’ ಎಂಬ ಹೆಸರಿನ ನನ್ನ ಪುಟ್ಟ ಕತೆಯೊಂದರ ಆಶಯಗಳು, ಪ್ರಸಕ್ತ ವರ್ಷದಲ್ಲಿ ಪರಿಷ್ಕೃತಗೊಂಡಿರುವ/ಗೊಳ್ಳಲಿರುವ  ಇತರ ಕೆಲವು ಪಠ್ಯಗಳ ಆಶಯಗಳೊಂದಿಗೆ ಸರಿಯಾಗಿ ಹೊಂದಿಕೆಯಾಗದಿರುವ ಸಾಧ್ಯತೆಗಳಿರುವುದರಿಂದ, ನಮ್ಮ ಪುಟ್ಟ ಮಕ್ಕಳು ಗೊಂದಲಕ್ಕೊಳಗಾಗುವ ಸಾಧ್ಯತೆಗಳುಂಟು.

ಆದ್ದರಿಂದ, ದಯವಿಟ್ಟು ‘ಸುಳ್ಳು ಹೇಳಬಾರದು’ ಎಂಬ ಈ ನನ್ನ ಕತೆಯನ್ನು ಕಿತ್ತು ಹಾಕಿ, ಪರಿಷ್ಕೃತ ಪಠ್ಯ ಕ್ರಮದ ಆಶಯಗಳಿಗೆ  ಹೊಂದಿಕೊಳ್ಳುವ ಬೇರೊಂದು ಪಠ್ಯವನ್ನು ಸೇರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಿದ್ದೇನೆ ಎಂದಿದ್ದಾರೆ.

Key words: Letter – Mohammed Kunhi – Education Minister