Wednesday, August 12, 2026

BDA Apartments

Home Front Page ಸಿದ‍್ಧರಾಮಯ್ಯ ಕೋಲಾರಕ್ಕೆ ಬರುವುದಾದರೇ ಸ್ವಾಗತ – ಮಾಜಿ ಸಂಸದ ಕೆ.ಎಚ್ ಮುನಿಯಪ್ಪ.

ಸಿದ‍್ಧರಾಮಯ್ಯ ಕೋಲಾರಕ್ಕೆ ಬರುವುದಾದರೇ ಸ್ವಾಗತ – ಮಾಜಿ ಸಂಸದ ಕೆ.ಎಚ್ ಮುನಿಯಪ್ಪ.

ಕೋಲಾರ,ಮಾರ್ಚ್,23,2022(www.justkannada.in):  ಮಾಜಿ ಸಿಎಂ ಸಿದ್ಧರಾಮಯ್ಯ ಕೋಲಾರಕ್ಕೆ ಬರುವುದಾದರೇ ಸ್ವಾಗತ ಕೋರುವೆ ಎಂದು ಮಾಜಿ ಸಂಸದ ಕೆಎಚ್ ಮುನಿಯಪ್ಪ ಹೇಳಿದರು.

ಕೋಲಾರದಲ್ಲಿ ಮಾತನಾಡಿದ ಕೆ.ಎಚ್ ಮುನಿಯಪ್ಪ, ಸಿದ‍್ಧರಾಮಯ್ಯ ಅವರು ರಾಜ್ಯದ ಸಿಎಂ ಆಗಿದ್ದವರು. ಹೀಗಾಗಿ ಅವರು ಕೋಲಾರಕ್ಕೆ ಬಂದರೇ ಅವರಿಗೆ ಸ್ವಾಗತ ಕೋರುವೆ ಎಂದಿದ್ದಾರೆ.

ಇನ್ನು ಮುಸ್ಲೀಂ ವ್ಯಾಪಾರಿಗಳಿಗೆ ನಿರ್ಬಂಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆಎಚ್ ಮುನಿಯಪ್ಪ, ಕೋಮುವಾದ ಹೆಚ್ಚುತ್ತಿದೆ ಇದಾಗಬಾರದು. ಕಟ್ಟ ಕಡೆಯ ವ್ಯಕ್ತಿಗೂ ಭಾರತ ಸಂವಿಧಾನದಲ್ಲಿ ಅವಕಾಶ ಇದೆ.  ಶತಮಾನಗಳಿಂದ ನಾವೆಲ್ಲಾ ಅಣ್ಣ ತಮ್ಮಂದಿರಂತೆ ಬದುಕಿದ್ದೇವೆ ಎಂದರು.

Key words: Welcome –Siddaramaiah-Kolar-Former MP- KH Muniyappa.