Tuesday, August 11, 2026

BDA Apartments

Home Front Page ಸಿಎಂ ಬಿಎಸ್ ವೈಗೆ ವೀರಶೈವ ಲಿಂಗಾಯತರು ನೆನಪಾಗೋದೇ ಖುರ್ಚಿ ಅಲುಗಾಡಿದಾಗ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್..

ಸಿಎಂ ಬಿಎಸ್ ವೈಗೆ ವೀರಶೈವ ಲಿಂಗಾಯತರು ನೆನಪಾಗೋದೇ ಖುರ್ಚಿ ಅಲುಗಾಡಿದಾಗ- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್..

ದಾವಣಗೆರೆ,ಜನವರಿ,29,2021(www.justkannada.in):  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ವೀರಶೈವ ಲಿಂಗಾಯತರು ನೆನಪಾಗುವುದೇ  ಅವರ ಕುರ್ಚಿ ಅಲುಗಾಡಿದಾಗ ಮಾತ್ರ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಲೇವಡಿ ಮಾಡಿದ್ದಾರೆ.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ.  ನನಗೆ ಯಾವುದೇ ಸಚಿವ ಸ್ಥಾನ ಬೇಕಿಲ್ಲ. ಪಂಚಮಸಾಲಿಗಳಿಗೆ ಮೀಸಲಾತಿ ನೀಡದಿದ್ದರೇ ಸಿಎಂ ಕುರ್ಚಿ ಇರಲ್ಲ ಎಂದು ಎಚ್ಚರಿಕೆ ನೀಡಿದರು.CM BS Yeddyurappa- Veerashiva Lingayatha- remembers -MLA -Basanagowda Patil Yatnal.

ಲಿಂಗಾಯತರು ಕಡಿಮೆ ಸಂಖ್ಯೆಯಲ್ಲಿದ್ದರೂ ಸಿಎಂ ಯಡಿಯೂರಪ್ಪ ಉತ್ತಮ ಖಾತೆ ನೀಡಿದ್ದಾರೆ. ಬಹುಸಂಖ್ಯಾತರಾದ ಪಂಚಮಸಾಲಿಗಳಿಗೆ ಸಿಗಬೇಕಾದ ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Key words: CM BS Yeddyurappa- Veerashiva Lingayatha- remembers -MLA -Basanagowda Patil Yatnal.