Tuesday, August 18, 2026

BDA Apartments

Home Front Page ಗಂಗಾವತಿ ಮತ್ತು ಶ್ರೀರಾಮನಗರದಲ್ಲಿ ಹತ್ತು ದಿನಗಳ ಕಾಲ‌ ಲಾಕ್ ಡೌನ್- ಸಚಿವ ಬಿ.ಸಿ.ಪಾಟೀಲ್

ಗಂಗಾವತಿ ಮತ್ತು ಶ್ರೀರಾಮನಗರದಲ್ಲಿ ಹತ್ತು ದಿನಗಳ ಕಾಲ‌ ಲಾಕ್ ಡೌನ್- ಸಚಿವ ಬಿ.ಸಿ.ಪಾಟೀಲ್

ಕೊಪ್ಪಳ,ಜು.20,2020(www.justkannada.in): ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್- 19 ಪ್ರಕರಣಗಳು ಹೆಚ್ಚಾಗಿ ಗಂಗಾವತಿ ತಾಲೂಕಿನಲ್ಲಿ ಹೆಚ್ಚು ಕಂಡು ಬರುತ್ತಿರುವುದರಿಂದ ಸ್ಥಳೀಯ ಶಾಸಕರು, ಸಂಸದರು ಹಾಗೂ ಅಧಿಕಾರಿಗಳ ಜೊತೆ ಚರ್ಚಿಸಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಗಂಗಾವತಿ ಟವನ್  ಶ್ರೀರಾಮನಗರಗಳನ್ನು ಕೊರೊನಾ ಹಾಟ್ ಸ್ಪಾಟ್‌ಗಳೆಂದು ಗುರುತಿಸಿ ಜುಲೈ 21ರ ರಾತ್ರಿ 8ರಿಂದ 10 ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಮಾಡಲು‌ ನಿರ್ಧರಿಸಲಾಗಿದೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್  ಸ್ಪಷ್ಟಪಡಿಸಿದ್ದಾರೆ.jk-logo-justkannada-logo

ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೊರೊನಾ ಸಂಬಂಧ ಪ್ರಗತಿಪರಿಶೀಲನಾ ಸಭೆ ನಡೆಸಿ ಬಳಿಕ ಮಾತನಾಡಿದ ಸಚಿವ ಬಿ.ಸಿ ಪಾಟೀಲ್ , ಕೊಪ್ಪಳದ ಭಾಗ್ಯನಗರದ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತೊಮ್ಮೆ ಪರಿಶೀಲಿಸಿ ಭಾಗ್ಯನಗರವನ್ನು ಲಾಕ್ ಡೌನ್  ಮಾಡಬೇಕೇ ಬೇಡವೇ ಎಂಬುದನ್ನು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಲಾಕ್ಢೌನ್ ಪ್ರದೇಶಗಳಲ್ಲಿ ತುರ್ತು ಸೇವೆಗ ಆಹಾರ ಪದಾರ್ಥ ಮಾರಾಟಕ್ಕೆ ಕೃಷಿ ಚಟುವಟಿಕೆ ರಸಗೊಬ್ಬರ ಮಾರಾಟಕ್ಕೆ, ಹಾಲಿನ ಬೂತ್ ಮೆಡಿಕಲ್ ಷಾಪ್‌ಗಳಿಗೆ ವಿನಾಯಿತಿ ನೀಡಲಾಗಿದೆ. ಮದ್ಯದಂಗಡಿಗಳು ಬಂದ್ ಇರುತ್ತವೆ.ಲಾಕ್ಡೌನ್ ಸಂಬಂಧ ಜಿಲ್ಲಾಧಿಕಾರಿಗಳು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.

55 ಲಕ್ಷ ರೂ.ಮೊತ್ತದಲ್ಲಿ 1, 343 ಆಶಾಕಾರ್ಯಕರ್ತೆಯರಿಗೆ ಹೆಲ್ತ್ ಕಿಟ್ ಖರೀದಿಸಲಾಗುವುದು.  ತಾಲೂಕುವಾರು ಐಸಿಯು ಬೆಡ್ ಮಾನಿಟರ್‌ಗಳಿಗೆ 76ಲಕ್ಷ ರೂ.ವೆಚ್ಚ ಮಾಡಲಾಗುತ್ತಿದೆ. ಲ್ಯಾಬ್ ಟೆಕ್ಷಿಷಿಯನ್ಸ್‌ಗಳ ಕೊರತೆ ನೀಗಿಸಲು ಈಗಾಗಲೇ 13 ಜನರ  ಟೆಂಡರ್ ಕರೆಯಲಾಗಿದ್ದು, ಆದಷ್ಟು ಬೇಗ ಅವರನ್ನು ನೇಮಕ ಮಾಡಲಾಗುವುದು. ತುರ್ತು ಲಭ್ಯತೆ ಅವಶ್ಯಕತೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿಸಲಾಗುವುದು.30ಮೊಬೈಲ್ ಹೆಲ್ತ್ ಯುನಿಟ್‌ಗಳನ್ನು ಜಿಲ್ಲಾದ್ಯಂತ ಆರಂಭಿಸುವುದಾಗಿ ಹಾಗೂ ಜಿಲ್ಲೆಯ ಗಡಿಭಾಗಗಳಲ್ಲಿ ಅಂತರ್ ಜಿಲ್ಲಾ ಚೆಕ್‌ಪೋಸ್ಟ್ ಆರಂಭಿಸುತ್ತಿರುವುದಾಗಿ ಸಚಿವ ಬಿ.ಸಿ ಪಾಟೀಲ್ ಮಾಹಿತಿ ನೀಡಿದರು.lockdown-ten-days-gangavati-sriramanagar-minister-b-c-patil

ರಾಜ್ಯದಲ್ಲಿ  ರಸಗೊಬ್ಬರದ ಕೊರತೆಯಿಲ್ಲ.ಯಾರಾದರೂ ಕೃತಕವಾಗಿ ಗೊಬ್ಬರದ ಅಭಾವ ಸೃಷ್ಟಿಸಿದರೆ ಅಂತವರ ವಿರುದ್ಧ ಕೃಷಿ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ಜರುಗಿಸಬೇಕೆಂದು ನಿರ್ದೇಶಿಸಿದರು.

ಎಲ್ಲಾ ಕಡೆಗಳಲ್ಲಿಯೂ ಕೋವಿಡ್-19‌ಪ್ರಕರಣಗಳು ಹೆಚ್ಚುತ್ತಿವೆ‌. ಕೊಪ್ಪಳ ಜಿಲ್ಲೆಯಲ್ಲೂ ಪ್ರಕರಣಗಳು ಹೆಚ್ಚುತ್ತಿವೆ. ಈ  ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೊರೊಮಾ ನಿಯಂತ್ರಣಕ್ಕಾಗಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗಿದೆ.ಲಾಕ್‌ಡೌನ್ ಮಾಡಿದರೆ ಕೊರೊನಾ ಹೋಗುತ್ತದೆ. ಇಲ್ಲದಿದ್ದರೆ ಹೋಗುವುದಿಲ್ಲ ಎನ್ನುವುದೆಲ್ಲ ತಪ್ಪು.ಸರ್ಕಾರದ ಸೂಚನಾ ಕ್ರಮಗಳಿಗೆ ಜನರ ಸಹಕಾರ ಬೇಕು. ರಾಜ್ಯ ಸರ್ಕಾದ ವಿಫಲ ಆಗಿಲ್ಲ.ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸರ್ಕಾರದ ನಡೆಯನ್ನು ಸಚಿವ ಬಿ.ಸಿ ಪಾಟೀಲ್ ಸಮರ್ಥಿಸಿದರು.

ಸುದ್ದಿಗೋಷ್ಠಿಗೂ ಮುನ್ನ ಮಾಜಿ ಸಂಸದ ಶಿವರಾಜ್ ತಂಗಡಗಿ ವಿರುದ್ಧ ಹರಿಹಾಯ್ದ ಸಚಿವ ಬಿ.ಸಿ ಪಾಟೀಲ್, ತಂಗಡಗಿಯವರು ಬಹಳ ಸತ್ಯಹರಿಶ್ಚಂದ್ರರು ಸತ್ಯವಂತರು.ಅವರಂತೆ ಯಾರಿಲ್ಲ‌.ಹೀಗಾಗಿಯೇ ಕ್ಷೇತ್ರದ ಜನತೆ ಅವರನ್ನು ಎಲ್ಲಿಡಬೇಕೋ ಅಲ್ಲಿಯೇ ಇಟ್ಟಿದ್ದಾರೆ ಎಂದು  ತಿರುಗೇಟು ನೀಡಿದರು.

Key words: Lockdown – ten days – Gangavati – Sriramanagar-Minister -B.C. Patil