Monday, August 31, 2026

BDA Apartments

Home Front Page ನಾಳಿನ ಬಂದ್ ಗೆ ಬೆಂಬಲವಿದೆ; ಆದ್ರೆ ಬಸ್ ಸಂಚಾರ ನಿಲ್ಲಿಸಲ್ಲ- ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟನೆ…

ನಾಳಿನ ಬಂದ್ ಗೆ ಬೆಂಬಲವಿದೆ; ಆದ್ರೆ ಬಸ್ ಸಂಚಾರ ನಿಲ್ಲಿಸಲ್ಲ- ಡಿಸಿಎಂ ಲಕ್ಷ್ಮಣ್ ಸವದಿ ಸ್ಪಷ್ಟನೆ…

ಬೆಂಗಳೂರು,ಫೆ,12,2020(www.justkannada.in): ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಾಳೆ ಕರೆ ನೀಡಿರುವ ಬಂದ್  ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ನಾಳಿನ ಬಂದ್ ಗೆ ನಮ್ಮ ಬೆಂಬಲವಿದೆ. ಆದರೆ ಬಸ್ ಸಂಚಾರ ನಿಲ್ಲಿಸಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ಬಂದ್ ಬಗ್ಗೆ ನಮ್ಮ  ಕೆಎಸ್ ಆರ್ ಟಿಸಿ ನೌಕರರ ಸಂಘಟನೆ  ಮಾಹಿತಿ ನೀಡಿದೆ.  ಬಂದ್ ಗೆ ಬೆಂಬಲ ನೀಡುತ್ತೇವೆ ಆದರೆ ಬಸ್ ಸಂಚಾರ ನಿಲ್ಲಿಸಲ್ಲ. ಸಾರಿಗೆ ಬಸ್ ಗಳ ಓಡಾಟಕ್ಕೆ ತೊಂದರೆ ಇಲ್ಲ. ಒಂದು ವೇಳೆ  ಪರಿಸ್ಥಿತಿ ಕೈ ಮೀರಿದರೇ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ  ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದು ಕೆಲ ಸಂಘಟನೆಗಳು ನೈತಿಕ ಬೆಂಬಲ ನೀಡಿವೆ.

Key words: support – tomorrow- band-  DCM Laxman Savadi -clarified.