Wednesday, August 19, 2026

BDA Apartments

Home Crime ಮೈಸೂರಿನಲ್ಲಿ ಮನೆಗೆ ನುಗ್ಗಿ ಸರಗಳ್ಳತನ ಮಾಡಲೆತ್ನಿಸಿ ಒದೆ ತಿಂದ ಕಳ್ಳ !

ಮೈಸೂರಿನಲ್ಲಿ ಮನೆಗೆ ನುಗ್ಗಿ ಸರಗಳ್ಳತನ ಮಾಡಲೆತ್ನಿಸಿ ಒದೆ ತಿಂದ ಕಳ್ಳ !

ಮೈಸೂರು, ಜನವರಿ 04, 2019 (www.justkannada.in): ಮನೆಗೆ ನುಗ್ಗಿ ಸರ ಕಸಿಯಲು ಪ್ರಯತ್ನಿಸಿದ ಕಳ್ಳ ಸಾರ್ವಜನಿಕರಿಂದ ಒದೆ ತಿಂದಿದ್ದಾನೆ.

ಮೈಸೂರಿನ ಹೊಸಕೇರಿ 5ನೇ ಕ್ರಾಸಿನಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿ ಒಂಟಿ ಮಹಿಳೆ ಇರೋದನ್ನ ಗಮನಿಸಿ ಮನೆಗೆ ನುಗ್ಗಿದ ಕಳ್ಳ. ಕಳ್ಳನ ಸಡನ್ ಎಂಟ್ರಿ ಇಂದ ಗಾಬರಿಗೊಂಡು ಚೀರಾಡಿದ ಮಹಿಳೆ.

ಕಳ್ಳನನ್ನ ಹಿಡಿದು ಕಂಬಕ್ಕೆ ಕಟ್ಟಿ ಥಳಿತ ಮಾಡಲಾಗಿತ್ತು. ನಂತರ ಕೆ ಆರ್ ಠಾಣೆ ಪೊಲೀಸರಿಗೆ ಒಪ್ಪಿಸಿದ ಸಾರ್ವಜನಿಕರು. ರಂಗನಾಥ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ ಸ್ಥಳಕ್ಕೆ ಪೊಲೀಸರ ಭೆಟಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.