Tuesday, September 15, 2026

BDA Apartments

Home Front Page ಡಿಕೆಶಿ ಕೆಪಾಸಿಟಿ ಸಿಎಂ: ಬಂಗಾರಪ್ಪ ರೀತಿ ಖಡಕ್ ನಿರ್ಧಾರ ತೆಗೆದುಕೊಳ್ಳಲಿ- MLC ಸಿ.ಟಿ ರವಿ

ಡಿಕೆಶಿ ಕೆಪಾಸಿಟಿ ಸಿಎಂ: ಬಂಗಾರಪ್ಪ ರೀತಿ ಖಡಕ್ ನಿರ್ಧಾರ ತೆಗೆದುಕೊಳ್ಳಲಿ- MLC ಸಿ.ಟಿ ರವಿ

ಮಂಡ್ಯ,ಜುಲೈ,31,2026 (www.justkannada.in):  ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶದ ವಿರುದ್ದ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು ಈ ಸಂಬಂಧ ಸಿಎಂ ಡಿಕೆ ಶಿವಕುಮಾರ್ ಖಡಕ್ ನಿರ್ಧಾರ ತೆಗೆದುಕೊಳ್ಳಲಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಸಲಹೆ ನೀಡಿದರು.

ಇಂದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆಆರ್ ಎಸ್ ಜಲಾಶಯದ ಬಳಿ ಬಿಜೆಪಿ ಪ್ರತಿಭಟನೆ ನಡೆಸಿ ತಮಿಳುನಾಡಿಗೆ ನೀರು ಬಿಡದಂತೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹಿಸಿತು.ಡಿಕೆಶಿ ಕೆಪಾಸಿಟಿ ಸಿಎಂ protest123 protest123 1

ಈ ವೇಳೆ ಮಾತನಾಡಿದ ಸಿ.ಟಿ ರವಿ, ಡಿಕೆ ಶಿವಕುಮಾರ್ ಕೆಪಾಸಿಟಿ ಸಿಎಂ.  ಬಂಗಾರಪ್ಪ ರೀತಿ ಖಡಕ್ ನಿರ್ಧಾರ ತೆಗೆದುಕೊಳ್ಳಲಿ.  ತಮಿಳುನಾಡಿನಲ್ಲಿ  ನಿಮ್ಮ ಮಿತ್ರ ಪಕ್ಷ ಮನವೊಲಿಸಿ ನೀವು ಹೆದರಬೇಡಿ ನಿಮ್ಮ ಜತೆ ನಾವಿದ್ದೇವೆ ಎಂದು ಸಿಟಿ ರವಿ ತಿಳಿಸಿದರು.ಬಂಗಾರಪ್ಪ ರೀತಿ ಖಡಕ್ ನಿರ್ಧಾರ ತೆಗೆದುಕೊಳ್ಳಲಿ jk02_new jk02 new

Key words: DK Shivakumar, Capacity CM, Water, decision, MLC,  CT Ravi