ಬೆಂಗಳೂರು,ಜುಲೈ,10,2026 (www.justkannada.in): ಜುಲೈ 1ರಿಂದ ಬೆಂಗಳೂರಿನಲ್ಲಿ ಫುಟ್ ಪಾತ್ ಒತ್ತುವರಿ ತೆರುವು ಕಾರ್ಯಚರಣೆ ನಡೆಯುತ್ತಿದೆ. ಈಗಾಗಲೇ 435ಕಿ.ಮೀ ಫುಟ್ ಪಾತ್ ಒತ್ತುವರಿ ತೆರವು ಆಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಇಂದು ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೀಕ್ಷಿಸಿ ಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು. ಜಯನಗರ ಅಶೋಕ್ ಪಿಲ್ಲರ್ ಬಳಿ ಪರಿಶೀಲಿಸಿ ಮಾತನಾಡಿದ ಅವರು, ತಳ್ಳುವ ಗಾಡಿ ತೆಗೆದುಕೊಂಡು ಹೋಗಲು ಅವಕಾಶ ಮಾಡಿಕೊಟ್ಟಿದ್ದೇವೆ. ಜಾಹೀರಾತು ಫಲಕ ರ್ಯಾಂಪ್ ಸ್ಟೆಪ್ಸ್, 247 ಶೆಡ್ ಗಳನ್ನ ತೆಗೆದಿದ್ದೇವೆ. 9800 ಜಾಗ ಗುರುತು ಮಾಡಿ ಅತಿಕ್ರಮಣ ತೆರವು ಮಾಡಿದ್ದೇವೆ. ಬೀದಿಬದಿ ವ್ಯಾಪಾರಿಗಳೀಗೆ ಬೇರೆಡೆ ಜಾಗ ಗುರುತಿಸಿಕೊಡುತ್ತೇವೆ ಎಂದರು.
ಫುಟ್ ಪಾತ್ ಒತ್ತುವರಿಯಲ್ಲಿ ದೊಡ್ಡ ಮಾಫಿಯಾ ಇದೆ. ಜಿಬಿಎ ವತಿಯಿಂದ ಫುಟ್ ಪಾತ್ ಒತ್ತುವರಿ ತೆರವು ಮುಂದುವರೆಯುತ್ತೆ. 900 ಪಾದಾಚಾರಿಗಳು ಮೃತಪಟ್ಟಿರುವ ಮಾಹಿತಿ ಇದೆ. ಜನರ ಅನುಕೂಲಕ್ಕೆ ಒತ್ತುವರಿ ತೆರವು ಮಾಡುತ್ತಿದ್ದೇವೆ. ಜಯನಗರ ಮಾರ್ಕೆಟ್ ಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ ಎಂದರು. 
ಫುಟ್ ಪಾತ್ ತೆರವು ಕಾರ್ಯಾಚರಣೆ ಮುಂದುವರೆಯುತ್ತೆ ನೋಂದಣಿ ಆಗಿರುವ ಬೀದಿಬದಿ ವ್ಯಾಪಾರಿಗಳಿಗೆ ಅವರಿಗೆಲ್ಲಾ ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತೆ ಎಂದರು.
Key words: 435 km, footpath encroachment, cleared, CM DK Shivakumar






