Friday, August 28, 2026

BDA Apartments

Home Front Page ಗೃಹ ಸಚಿವರ ಮುಂದೆ ಹೈಡ್ರಾಮಾ:KRS ಪಕ್ಷದ ಮುಖಂಡ ಪೊಲೀಸರ ವಶಕ್ಕೆ..!

ಗೃಹ ಸಚಿವರ ಮುಂದೆ ಹೈಡ್ರಾಮಾ:KRS ಪಕ್ಷದ ಮುಖಂಡ ಪೊಲೀಸರ ವಶಕ್ಕೆ..!

ತುಮಕೂರು ,ಏಪ್ರಿಲ್,8,2026 (www.justkannada.in):  ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗೆ ಮನವಿ ನೀಡಲು ಬಂದ ಕೆಆರ್ ಎಸ್ ಪಕ್ಷದ ಮುಖಂಡರೊಬ್ಬರು ಫೇಸ್ ಬುಕ್ ಲೈವ್ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದು ಈ ವೇಳೆ ಹೈಡ್ರಾಮಾವೇ ನಡೆದಿದೆ.

ತುಮಕೂರಿನಲ್ಲಿ ಈ ಘಟನೆ ನಡೆದಿದ್ದು  ಗೃಹ ಸಚಿವ ಜಿ ಪರಮೇಶ್ವರ್ ಗೆ KRS ಪಕ್ಷದ ಮುಖಂಡ ಶಾಮ್ ಸುಂದರ್ ಮನವಿ ಪತ್ರ ಸಲ್ಲಿಸಲು ಬಂದಿದ್ದರು. ಮನವಿ ಮಾಡುವ ವೇಳೆ ಶಾಮ ಸುಂದರ್ ಫೇಸ್ ಬುಕ್  ಲೈವ್ ಬಂದಿದ್ದಾರೆ. ಆದರೆ ಇದಕ್ಕೆ ಗೃಹ ಸಚಿವ ಪರಮೇಶ್ವರ್ ವಿರೋಧಿಸಿದ್ದಾರೆ.

ಆದರೂ ಕೂಡ  ಶಾಮ್ ಸುಂದರ್ ಫೇಸ್ ಬುಕ್  ಲೈವ್ ಮುಂದುವರೆಸಿದ್ದು  ಈ ವೇಳೆ ಗೃಹ ಸಚಿವ ಪರಮೇಶ್ವರ್ ಗರಂ ಆಗಿದರು. ಈ ಸಮಯದಲ್ಲಿ ಪೊಲೀಸರಿಗೆ ಸೂಚನೆ ನೀಡಿದ್ದು ತಕ್ಷಣ ಪೊಲೀಸರು ಕೆ.ಆರ್ ಪಕ್ಷದ ಮುಖಂಡರ ಶ್ಯಾಮ್ ಸುಂದರನ್ನು ವಶಕ್ಕೆ ಪಡೆದುಕೊಂಡರು.  ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

Key words: Tumakur, Home Minister, Parameshwar, KRS party, leader