ಯುದ್ದದ ಎಫೆಕ್ಟ್: ಔಷಧಿಗಳ ದರ ಏರಿಕೆಯಾದರೆ ಏನು ಮಾಡೋಕೆ ಆಗಲ್ಲ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು,ಏಪ್ರಿಲ್,1,2026 (www.justkannada.in):  ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ದದ ಪರಿಣಾಮವಾಗಿ ಔಷಧಿಗಳ ದರ ಏರಿಕೆಯಾದರೆ ಏನು ಮಾಡೋಕೆ ಆಗಲ್ಲ ಎಂದು ಆಹಾರ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್,  ವಾರ್ ಎಫೆಕ್ಟ್ ಇದ್ದು ಔಷಧಿಗಳ ದರ ಏರಿಕೆಯಾದರೇ ಏನು ಮಾಡೋಕೆ ಆಗಲ್ಲ.  ಕೇಂದ್ರ ಸರ್ಕಾರ ಪಾಲಿಸಿ ಮೇಲೆ ನಿರ್ಧಾರ ಆಗುತ್ತದೆ.

ಔಷದಳ ದರ ಏರಿಕೆ ಮಾಡೊದು ನಮ್ಮ ಕೈಯಲ್ಲಿ ಇಲ್ಲ. ರೋಗಿಗಳಿಗೆ ಔಷಧ ಕಡಿಮೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ.  ರೋಗಿಗಳ ಹಿತದೃಷ್ಟಿ ನಮಗೆ ಮುಖ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Key words: war Effect, price, medicines, Minister, Dinesh Gundurao