Saturday, September 5, 2026

BDA Apartments

Home Front Page ‘ನಾವು ಭಾರತಕ್ಕೆ ಜೀವಂತವಾಗಿ ಬರ್ತೇವೆ ಅಂದುಕೊಂಡಿರಲಿಲ್ಲ..!’ ದುಬೈ ಪರಿಸ್ಥಿತಿ ಬಗ್ಗೆ ವಿವರಿಸಿದ MLC ಭೊಜೇಗೌಡ

‘ನಾವು ಭಾರತಕ್ಕೆ ಜೀವಂತವಾಗಿ ಬರ್ತೇವೆ ಅಂದುಕೊಂಡಿರಲಿಲ್ಲ..!’ ದುಬೈ ಪರಿಸ್ಥಿತಿ ಬಗ್ಗೆ ವಿವರಿಸಿದ MLC ಭೊಜೇಗೌಡ

ಬೆಂಗಳೂರು,ಮಾರ್ಚ್,3,2026 (www.justkannada.in):  ಇರಾನ್ ಮೇಲೆ ಇಸ್ರೇಲ್ ,ಅಮೇರಿಕಾ ದಾಳಿ ಬೆನ್ನಲ್ಲೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಅಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು ಸೇರಿ ಭಾರತೀಯರನ್ನ ವಾಪಸ್ ತಾಯ್ನಾಡಿಗೆ ಕರೆ ತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಮಧ್ಯೆ ದುಬೈನಲ್ಲಿ ಸಿಲುಕಿಕೊಂಡಿದ್ದ ವಿಧಾನಪರಿಷತ್ ಸದಸ್ಯ ಬೋಜೇಗೌಡ ಅವರು ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ  ಎಂಎಲ್ ಸಿ ಭೋಜೆಗೌಡ ” ನಾನು ದಕ್ಷಿಣ ಆಫ್ರಿಕಾಗೆ ಹೋಗಿದ್ದೆ, ಅಲ್ಲಿಂದ ಭಾರತಕ್ಕೆ ವಾಪಸ್‌ ದುಬೈ ಮೂಲಕ ಬರಬೇಕಿತ್ತು. ಆದರೆ ನನ್ನ ಫ್ಲೈಟ್‌ ತಡವಾಯಿತು. ಆಗ ಕಾರಣವನ್ನು ವಿಚಾರಿಸಿದಾಗ ಅಬುದಾಬಿಯಲ್ಲಿ ಬಾಂಬ್ ದಾಳಿ ಆಗುತ್ತಿದೆ ಎಂದರು, ಇದಾದ ಕೆಲ ಹೊತ್ತಿನಲ್ಲೇ ನಮ್ಮನ್ನು ಫ್ಲೈಟ್ ನಿಂದಲೇ ಇಳಿಸಿದರು. . ಆ ಕ್ಷಣದಲ್ಲಿ ನಾವು ಏನು ಮಾಡಬೇಕು ಅನ್ನೋದು ತಿಳಿಯಲಿಲ್ಲ. ನಾನು ನನ್ನ ಪತ್ನಿ ಬದುಕಿ ಬರುತ್ತೇವೆ.  ಅಂದುಕೊಂಡಿರಲಿಲ್ಲ. ನಾವು ಭಾರತಕ್ಕೆ ಜೀವಂತ ಬರುತ್ತೇವೆ ಎಂದು ಕೊಂಡಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಈ ವೇಳೆ  ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು  ದೂರವಾಣಿ ಕರೆ ಮೂಲಕ ಧೈರ್ಯ ತುಂಬಿ ದುಬೈ ಹೋಟೆಲ್‌ ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯನ್ನೂ ಮಾಡಿಕೊಟ್ಟರು. ಆದಾಗ್ಯೂ, ನನಗೆ ಅಲ್ಲಿನ ಪರಿಸ್ಥಿತಿಗಳಿಂದ ಆತಂಕ ಕಾಡುತ್ತಲೇ ಇತ್ತು ಇನ್ನು, ಸಿಎಂ ಸಿದ್ದರಾಮಯ್ಯ , ಸಚಿವರಾದ ಕೃಷ್ಣ ಭೈರೇಗೌಡ ನನ್ನನ್ನು ಸಂಪರ್ಕಿಸಿ ಪರಿಸ್ಥಿತಿ ಕುರಿತು ತಿಳಿದುಕೊಂಡರು. ಅಲ್ಲಿನ ಯುದ್ದವಾತಾವರಣದಿಂದ ನಾವು ಇಷ್ಟು ಬೇಗ ತಾಯ್ನಾಡಿಗೆ ಮರಳುತ್ತೇವೆ ಎಂದು ಊಹಿಸಿರಲಿಲ್ಲ ಎಂದು ಭೋಜೇಗೌಡ ಅವರು ತಮಗಾದ ಅನುಭವ ಹಂಚಿಕೊಂಡಿದ್ದಾರೆ.

Key words: MLC, Bhoje Gowda, situation, Dubai