ಬೆಂಗಳೂರು,ಫೆಬ್ರವರಿ,18,2026 (www.justkannada.in): ಸರ್ಕಾರದ ವಿರುದ್ದ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರು ಬಾಕಿ ಇರುವ 37 ಸಾವಿರ ಕೋಟಿ ರೂ. ಬಿಲ್ ಬಿಡುಗಡೆ ಮಾಡಿವಂತೆ ಆಗ್ರಹಿಸಿ ಮಾರ್ಚ್ 5 ರಂದು ಕೆಲಸ ಸ್ಥಗಿಸಿ ಪ್ರತಿಭಟನೆಗೆ ಮುಂದಾಗಿದ್ದು ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ.
ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕಮಿಷನ್ ಇದ್ದರೆ ದೂರು ಕೋಡೋದಕ್ಕೆ ಹೇಳಿ. ಮೊದಲು ಕಾಮಗಾರಿ ನಿಲ್ಲಿಸಲಿ ನೋಡೋಣ ಎಂದು ಹರಿಹಾಯ್ದರು.
ಬಿಜೆಪಿ ಕಾಲದಲ್ಲಿ ಯಾಕೆ ಕಾಮಗಾರಿ ತೆಗೆದುಕೊಂಡರು ನಾವು ಅವತ್ತೇ ಹೇಳಿದ್ದವು. ಬಿಜೆಪಿ ಕಾಲದಲ್ಲಿ ದುಡ್ಡಿಲ್ಲ ಕೆಲಸ ತಗೋಬೇಡಿ ಎಂದಿದ್ದವು ಆದರೂ ಫಂಡ್ ಇಲ್ಲದೆ ಇವರು ಯಾಕೆ ಕೆಲಸ ತೆಗೆದುಕೊಂಡರು ಎಂದು ಪ್ರಶ್ನಿಸಿದರು .
10 ಸಾವಿರ ಅನುದಾನ ಇದ್ರೆ 30 ಸಾವಿರ ಟೆಂಡರ್ ನೀಡಲಾಗಿದೆ . ಅವರಿಗೆ ದುಡ್ಡುಬೇಕು ಇಲ್ಲ ಅನ್ನಲ್ಲ. ಬಿಜೆಪಿ ಅವಧಿಯಲ್ಲಿ ಅನುದಾನ ಇಲ್ಲದೆಯೇ ಏಕೆ ಗುತ್ತಿಗೆ ತೆಗೆದುಕೊಂಡರು. ಅವರು ಕೆಲಸ ನಿಲ್ಲಿಸಲಿ ಏನಾದರೂ ಮಾಡಿಕೊಳ್ಳಲಿ ಎಂದು ಡಿಕೆಶಿ ನುಡಿದರು.
Key words: fund, work, Contractor, DCM, DK Shivakumar







